ಅರ್ಹರಿಗೆ ಪ್ರಶಸ್ತಿ ಸಿಗಲಿ

Update: 2017-10-20 18:32 GMT

ಮಾನ್ಯರೆ,

ರಾಜ್ಯೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕ್ಷೇತ್ರದಲ್ಲಿರುವ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಈಗ ಸಾಧಕರು ‘ನಾನೂ ಸಾಧನೆ ಮಾಡಿದ್ದೇನೆ’ ಎಂದು ಹೇಳಿ ಅರ್ಜಿ ಸಲ್ಲಿಸಿ ಪ್ರಶಸ್ತಿ ಪಡೆಯ ಬೇಕಾದ ಪರಿಸ್ಥಿತಿ ಇದೆ. ಅಲ್ಲದೆ ಈ ಸಲ ಇಂತಹ ಅರ್ಜಿಗಳ ಸಂಖ್ಯೆ ಸಾವಿರ ದಾಟಿದೆ ಎಂಬ ಮಾಹಿತಿ ಇದೆ.
ನಿಜವಾದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಗಲೇಬೇಕು. ಆದರೆ ಈ ವೇಳೆ ಸಚಿವರು, ಶಾಸಕರ ಪ್ರಭಾವ ಬಳಸಿ ಪ್ರಶಸ್ತಿ ಪಡೆಯಲು ಪೈಪೋಟಿ ನಡೆಸುವವರಿಗೆ ಲಗಾಮು ಹಾಕಬೇಕು. ಯಾವುದೇ ಲಾಬಿಗೆ ಮಣಿಯದೇ ಅರ್ಹ ಸಾಧಕರಿಗೆ ಪ್ರಶಸ್ತಿ ನೀಡಬೇಕು. ಆಗ ಪ್ರಶಸ್ತಿಗೂ ಬೆಲೆ ಬರುತ್ತದೆ.

Writer - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News