ಪಂಚಕುಲಾ ಸಿಲಿಂಡರ್ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 5ಕ್ಕೇರಿಕೆ

Update: 2017-10-23 13:23 GMT

ಪಂಚಕುಲ, ಅ 23 : ಇಲ್ಲಿನ ಸೆಕ್ಟರ್ 10ರಲ್ಲಿನ ಮನೆಯೊಂದರಲ್ಲಿ  ಕಳೆದ ಶುಕ್ರವಾರ ಉಂಟಾದ ಸಿಲಿಂಡರ್ ಸ್ಫೋಟದಲ್ಲಿ  ಗಾಯಗೊಂಡಿದ್ದ ಇನ್ನಿಬ್ಬರು ಚಂಡೀಗಢದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾಗುವುದರೊಂದಿಗೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೇರಿದೆ.

ಸಾವಿಗೀಡಾದವರಲ್ಲಿ ಮನೆಯ ಯಜಮಾನ 34 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಅಜಿತ್ ಚೌಧುರಿ ಸೇರಿದ್ದಾರೆ. ಅಜಿತ್ ಅವರ ನೆರೆಮನೆಯ ನಿವಾಸಿ  77 ವರ್ಷದ ಆರ್ ಸಿ ಶರ್ಮ ಕೂಡ ದುರಂತದಲ್ಲಿ ಸಾವನ್ನಪ್ಪಿದ್ದಾರೆ.  ರವಿವಾರ ಮೃತಪಟ್ಟವರಲ್ಲಿ ಅಜಿತ್ ನೆರೆಮನೆಯ ಇನ್ನೊಬ್ಬ ವ್ಯಕ್ತಿ ಹೇಮ್ ರಾಜ್ ಶರ್ಮ ಆಗಿದ್ದಾರೆ. ಶುಕ್ರವಾರ ಮನೆಯಿಂದ ಹೊಗೆ ಕಾಣಿಸಲಾರಂಭಿಸಿದಾಗ ಹೊರಗೆ ನೆರೆದಿದ್ದವರೇ  ದುರಂತದಲ್ಲಿ ಸಾವಿಗೀಡಾದವರಾಗಿದ್ದಾರೆ.  ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗುತ್ತಿದೆಯೆಂಬ ಮಾಹಿತಿ ಪಡೆಯುತ್ತಿದ್ದಂತೆಯೇ ಮಾರ್ಕೆಟ್ ಗೆ ಹೋಗಿದ್ದ ಅಜಿತ್ ಓಡಿ ಬಂದು ಬಾಗಿಲು ತೆರೆದಾಗಲೇ ಸಿಲಿಂಡರ್ ಸ್ಫೋಟಗೊಂಡಿತ್ತಲ್ಲದೆ  ಈ ಒಂದು ಮಹಡಿಯ ಕಟ್ಟಡದ ಎದುರಿನ ಭಾಗ ಸಂಪೂರ್ಣವಾಗಿ ಕುಸಿದಿತ್ತು.

ಗಾಯಾಳುಗಳ ಪೈಕಿ ರಾಜ್ ಕುಮಾರ್ ಸಿಂಗ್ಲ ಎಂಬವರ ಸ್ಥಿತಿ ಗಂಭೀರವಾಗಿದೆಯೆನ್ನಲಾಗಿದೆ.

ಮೃತ ಅಜಿತ್ ತಮ್ಮ ಪತ್ನಿ ಹಾಗೂ ಆರು ಮತ್ತು ಎರಡು ವರ್ಷದ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News