ಸಜೀವ ದಹನ ಪ್ರಕರಣ: ಮೃತನ ಕುಟುಂಬಕ್ಕೆ 5 ಲ.ರೂ.ಚೆಕ್ ಹಸ್ತಾಂತರ

Update: 2017-12-09 16:11 GMT

ಜೈಪುರ,ಡಿ.9: ಡಿ.6ರಂದು ರಾಜಸಮಂದ್ ಜಿಲ್ಲೆಯಲ್ಲಿ ಶಂಭುಲಾಲ ರಾಯಘರ್ ಎಂಬಾತನಿಂದ ಬರ್ಬರವಾಗಿ ಹತ್ಯೆಯಾಗಿದ್ದ ಮುಹಮ್ಮದ್ ಅಫ್ರಾಝುಲ್ ಅವರ ಕುಟುಂಬಕ್ಕೆ ಐದು ಲ.ರೂ.ಗಳ ಪರಿಹಾರ ಧನದ ಚೆಕ್‌ನ್ನು ರಾಜಸ್ಥಾನ ಸರಕಾರವು ಶನಿವಾರ ಹಸ್ತಾಂತರಿಸಿದೆ.

ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಸೂಚನೆಯಂತೆ ಡಿಜಿಪಿ ಓಂ ಪ್ರಕಾಶ ಗಲ್ಹೋತ್ರಾ ಅವರು ಶನಿವಾರ ಕೊಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಎಸ್‌ಪಿ ಕಚೇರಿಯಲ್ಲಿ ಅಫ್ರಾಝುಲ್ ಕುಟುಂಬ ಸದಸ್ಯರನ್ನೂ ಅವರು ಭೇಟಿಯಾದರು.

ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ವಿರುದ್ಧ ಅತ್ಯಂತ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ ಎಂದು ಗಲ್ಹೋತ್ರಾ ತಿಳಿಸಿದರು.

ಶಂಬುಲಾಲ್ ‘ಲವ್ ಜಿಹಾದ್’ ಆರೋಪದಲ್ಲಿ ಅಫ್ರಾಝುಲ್ ಅವರನ್ನು ಥಳಿಸಿ, ಬಳಿಕ ಬೆಂಕಿ ಹಚ್ಚಿದ್ದ. ಈ ವೀಡಿಯೊವನ್ನು ಆತ ಸಾಮಾಜಿಕ ಮಾಧ್ಯಮಗಳಿಗೆ ಅಪ್‌ಲೋಡ್ ಮಾಡಿದ್ದು, ಅದು ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News