ಲೋಕಸಭೆಯಲ್ಲಿ ತ್ರಿವಳಿ ತಲಾಖ್ ವಿಧೇಯಕ ಮಂಡನೆ

Update: 2017-12-28 08:35 GMT

ಹೊಸದಿಲ್ಲಿ, ಡಿ.28: ತ್ರಿವಳಿ ತಲಾಖ್ ವಿಧೇಯಕವನ್ನು ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಮಂಡಿಸಿದರು.

ವಿಪಕ್ಷಗಳಾದ  ಟಿಎಂಸಿ ,ಬಿಜೆಡಿ, ಆರ್ ಜೆಡಿ , ಎಐಎಂಐಎಂ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. 

ಎಐಎಂಐಎಂ ಪಕ್ಷದ ನಾಯಕ ಅಸ್ಸಾದುದ್ದೀನ್  ಓವೈಸಿ ಮಾತನಾಡಿ " ವಿಧೇಯಕದಲ್ಲಿ ಮೂಲಭೂತ ಹಕ್ಕುಗಳಿಗೆ  ಧಕ್ಕೆಯಾಗಿದೆ.

 ಬಿಲ್ ಜಾರಿಯಿಂದ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗಲಿದೆ. ಅವರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. ಈ ಸಂಬಂಧ ಮುಸ್ಲಿಂ ಸಮುದಾಯದವರ ಅಭಿಪ್ರಾಯ ಪಡೆದಿಲ್ಲ " ಎಂದರು

ಈ ವಿಧೇಯಕ ಸಂವಿಧಾನಬದ್ಧವಾಗಿಯೇ ಇದೆ ಎಂದು ಕಾನೂನು ಸಚಿವ ರವಿಶಂಕರ್ ಪ್ರಸಾದ್  ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News