ಸಲ್ಮಾನ್ ಖಾನ್ ನನ್ನು ಕೊಲ್ಲುತ್ತೇನೆ: ನ್ಯಾಯಾಲಯದ ಮುಂದೆಯೇ ಬೆದರಿಕೆಯೊಡ್ಡಿದ ಗ್ಯಾಂಗ್ ಸ್ಟರ್!

Update: 2018-01-06 09:03 GMT

ಜೋಧ್ ಪುರ, ಜ.6: ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಕೊಲ್ಲುವುದಾಗಿ ಪಂಜಾಬ್ ಮೂಲದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಶ್ನೋಯಿ ಬೆದರಿಕೆಯೊಡ್ಡಿದ್ದಾನೆ.

ನಟೋರಿಯಸ್ ಗ್ಯಾಂಗ್ ಸ್ಟರ್ ಬಿಶ್ನೋಯಿಯನ್ನು ಶುಕ್ರವಾರ ಇಲ್ಲಿನ ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪೊಲೀಸ್ ವಾಹನಕ್ಕೆ ಹತ್ತುವ ಮೊದಲು, “ಜೋಧ್ ಪುರದಲ್ಲೇ ಸಲ್ಮಾನ್ ಖಾನ್ ನನ್ನು ಕೊಲ್ಲುತ್ತೇನೆ” ಎಂದು ಬೆದರಿಕೆಯೊಡ್ಡಿದ್ದಾನೆ.

ಬಿಶ್ನೋಯಿಯ ಸಹಚರನೊಬ್ಬ ಉದ್ಯಮಿಯೊಬ್ಬನನ್ನು ಕೊಂದಿದ್ದಲ್ಲದೆ, ಸುಲಿಗೆಗಾಗಿ ಗುಂಡಿನ ಮಳೆಗರೆದು ಜೋಧ್ ಪುರದಲ್ಲಿ ಆತಂಕ ಸೃಷ್ಟಿಸಿದ್ದ.

“ಸಲ್ಮಾನ್ ಖಾನ್ ನನ್ನು ಕೊಲ್ಲುವ ಗ್ಯಾಂಗ್ ಸ್ಟರ್ ಗಳ ಉದ್ದೇಶದ ಬಗ್ಗೆ ನಾವು ಎಚ್ಚೆತ್ತುಕೊಂಡಿದ್ದೇವೆ. ಸಲ್ಮಾನ್ ಖಾನ್ ನ ಸುರಕ್ಷತೆಯ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಈಗಾಗಲೇ ಕೈಗೊಂಡಿದ್ದೇವೆ” ಎಂದು ಪೊಲೀಸ್ ಕಮಿಷನರ್ ಅಶೋಕ್ ರಾಥೋಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News