ಜಲ್ಲಿಕಟ್ಟು: ಗೂಳಿ ತಿವಿದು 19 ವರ್ಷದ ಯುವಕ ಮೃತ್ಯು
Update: 2018-01-15 13:03 GMT
ಮಧುರೈ, ಜ.15: ಜಲ್ಲಿಕಟ್ಟು ಆಚರಣೆ ವೇಳೆ ಗೂಳಿ ತಿವಿತದಿಂದ 19 ವರ್ಷದ ಯುವಕನೊಬ್ಬ ಮೃತಪಟ್ಟ ಘಟನೆ ತಮಿಳುನಾಡಿನ ಮಧುರೈನ ಪಾಲಮೇಡು ಜಿಲ್ಲೆಯಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ಕಾಲಿಮುತ್ತು ಎಂದು ಗುರುತಿಸಲಾಗಿದೆ. ಈತ ಜಲ್ಲಿಕಟ್ಟು ವೀಕ್ಷಿಸುತ್ತಿದ್ದ ಸಂದರ್ಭ ವೇಗವಾಗಿ ನುಗ್ಗಿದ ಗೂಳಿ ತಿವಿದಿದೆ ಎನ್ನಲಾಗಿದೆ.
ಪೊಂಗಲ್ ದಿನ ತಮಿಳುನಾಡಿನ ಕೆಲವೆಡೆ ಜಲ್ಲಿಕಟ್ಟು ಆಚರಣೆ ನಡೆಯುತ್ತದೆ.