ಅನಂತ್ ಕುಮಾರ್ ಹೆಗಡೆಯನ್ನು ಸಚಿವ ಸಂಪುಟದಿಂದ ಕಿತ್ತೊಗಿಯಿರಿ: ಪ್ರಧಾನಿಗೆ ಜಿಗ್ನೇಶ್ ಮೇವಾನಿ ಒತ್ತಾಯ

Update: 2018-01-22 16:56 GMT

ಹೊಸದಿಲ್ಲಿ, ಜ.22: ದಲಿತ ಹೋರಾಟಗಾರರನ್ನು ‘ನಾಯಿಗಳು’ ಎಂದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಗುಜರಾತ್ ನ ಶಾಸಕ, ಹೋರಾಟಗಾರ ಜಿಗ್ನೇಶ್ ಮೇವಾನಿ ಪ್ರಧಾನಿ ಮೋದಿುಯವರನ್ನು ಒತ್ತಾಯಿಸಿದ್ದಾರೆ.

ಜಾತ್ಯಾತೀತತೆ ಹಾಗು ಸಂವಿಧಾನ ಬದಲಾವಣೆ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದ ಅನಂತ್ ಕುಮಾರ್ ಹೆಗಡೆ ಈ ಹಿಂದೆಯೂ ವಿವಾದ ಸೃಷ್ಟಿಸಿದ್ದರು. ಸಚಿವರ ಈ ಹೇಳಿಕೆಗಳನ್ನು ವಿರೋಧಿಸಿ ದಲಿತ ಸಂಘಟನೆಗಳು ಬಳ್ಳಾರಿಯಲ್ಲಿ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆಗಳನ್ನು ಕೂಗಿತ್ತು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹೆಗಡೆ, “ನಾಯಿಗಳು ಬೊಗಳಿದರೆ ತಲೆಕೆಡಿಸಿಕೊಳ್ಳುವುದಿಲ್ಲ” ಎಂದಿದ್ದರು.

ಈ ಬಗ್ಗೆ  ಪ್ರತಿಕ್ರಿಯಿಸಿರುವ ಜಿಗ್ನೇಶ್ ಮೇವಾನಿ “ಇದು ಸಂಘಪರಿವಾರದ ಹಾಗು ಅದರ ಕಾರ್ಯಕರ್ತರ ಬ್ರಾಹ್ಮಣ್ಯದ ಮತ್ತು ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತದೆ. ಕೇಂದ್ರ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಹಾಗು ಅವರನ್ನು ಬಂಧಿಸಬೇಕು” ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News