ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ

Update: 2018-01-23 15:45 GMT

ಕರೀಂನಗರ್, ಜ. 23: ಜಗತಿಯಾಲ್ ಪಟ್ಟಣದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೀಟನಾಶಕ ಸೇವಿಸಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಸಾರಂಗಪುರ ಮಂಡಲ್‌ನ ರೆಚಾಪಲ್ಲಿಯ ಚ. ಗಂಗಯ್ಯ (36) ಎಂದು ಗುರುತಿಸಲಾಗಿದೆ.

 ಗಂಗಯ್ಯ 15 ವರ್ಷಗಳ ಹಿಂದೆ ಸರಳ ಮಾರಾಟ ಪತ್ರದ ಮೂಲಕ 1.2 ಎಕರೆ ಭೂಮಿ ಖರೀದಿಸಿದ್ದರು. ಆ ಭೂಮಿಯಲ್ಲಿ ಅವರು ಕೃಷಿ ಮಾಡುತ್ತಿದ್ದರು. ಆದರೆ, ಭೂಮಿಯನ್ನು ಅಧಿಕೃತಗೊಳಿಸುವಂತೆ ಕೋರಿದರೂ ಭೂಮಿಯ ಮಾರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದರಿಂದ ಖಿನ್ನರಾದ ಗಂಗಯ್ಯ ನಿನ್ನೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೀಟ ನಾಶಕ ಸೇವಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News