ಮೇಘಾಲಯ: ಬಿಜೆಪಿ ತೊರೆದ ಮಾಜಿ ಸಚಿವನಿಗೆ ಕಾಂಗ್ರೆಸ್ ಟಿಕೆಟ್
ಶಿಲ್ಲಾಂಗ್,ಫೆ. 6: ಮೇಘಾಲಯದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದನ್ನು ಪ್ರತಿಭಟಿಸಿ ಮಾಜಿ ಸಚಿವ ಮಾನಸ್ ಚೌಧರಿ ಬಿಜೆಪಿ ತೊರೆದಿದ್ದಾರೆ. ಚೌಧರಿ ಕಣ್ಣಿರಿಸಿದ್ದ ದಕ್ಷಿಣ ಶಿಲ್ಲಾಂಗ್ ಕ್ಷೇತ್ರದಲ್ಲಿಸ್ಪರ್ಧಿಸುವ ಅವಕಾಶವನ್ನು ಮಾಜಿ ಡೆಪ್ಯುಟಿ ಸ್ಪೀಕರ್ ಸಾನ್ಬರ್ ಶುಲೈಗೆ ಬಿಜೆಪಿ ನೀಡಿದೆ. ಬಿಜೆಪಿಗೆ ರಾಜೀನಾಮೆ ನೀಡಿದ ಗಂಟೆಗಳೊಳಗೆ ಚೌಧರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಾಕಿಯಿರಿಸಲಾಗಿದ್ದು ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಪಟ್ಟಿಯನ್ನು ಸೋಮವಾರ ಪ್ರಕಟಿಸಿದ್ದು, ಚೌಧರಿಗೆ ಟಿಕೆಟ್ ನೀಡಲಾಗಿದೆ. ಚೌಧರಿ ಬಯಸಿದಂತೆ ದಕ್ಷಿಣ ಶಿಲ್ಲಾಂಗ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಲಿದ್ದಾರೆ.
ಮೂರು ಸ್ಥಾನಗಳಿಗೆ ಗೆಲ್ಲುವ ಸಾಧ್ಯತೆಯ ಅಭ್ಯರ್ಥಿಯ ಕೊರತೆಯಿಂದ ಕಾಂಗ್ರೆಸ್ ಕಷ್ಟದಲ್ಲಿತ್ತು. ಈ ಹಂತದಲ್ಲಿ ಚೌಧರಿ ಬಿಜೆಪಿ ತೊರೆದಿದ್ದಾರೆ. 60 ಸದಸ್ಯರ ವಿಧಾನಸಭೆಗೆ ಕಾಂಗ್ರೆಸ್ 59 ಸ್ಥಾನಗಳ ಅಭ್ಯರ್ಥಿಗಳನ್ನು ಘೋಷಿಸಿದೆ. ಮುಖ್ಯಮಂತ್ರಿ ಮುಕುಲ್ ಸಾಂಗ್ಮ ಎರಡುಕಡೆಯಿಂದ ಸ್ಪರ್ಧಿಸಲಿದ್ದಾರೆ.