ಪಾದ್ರಿಯ ಇರಿದು ಕೊಲೆ ಪ್ರಕರಣ: ಆರೋಪಿಯ ಬಂಧನ

Update: 2018-03-02 14:53 GMT

ಕೊಚ್ಚಿ, ಮಾ. 2: ಕೊಚ್ಚಿಯಲ್ಲಿ 52 ವರ್ಷದ ಕೆಥೋಲಿಕ್ ಪಾದ್ರಿಯನ್ನು ಹತ್ಯೆಗೈದು ಪರಾರಿಯಾಗಿದ್ದ ಚರ್ಚ್ ಮಾಜಿ ಸಹಾಯಕನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಜಾನಿ ವೆಟ್ಟಕ್ಕಾಡನ್ (56) ಅವರನ್ನು ಮಲಯತ್ತೂರು ಕಾಡಿನಿಂದ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿ ಕೊಲೆಗೆ ಬಳಸಿದ ಆಯುಧವನ್ನು ಪೊಲೀಸರು ಗುರುವಾರ ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.

    ಸಂತ ಥಾಮಸ್ ಅಂತಾರಾಷ್ಟ್ರೀಯ ಬೆಟ್ಟದ ಚರ್ಚ್ ‘ಕುರಿಸುಮುಡಿ’ಯಲ್ಲಿ ರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಫಾ. ಕ್ಸೇವಿಯರ್ ಥೇಲಕ್ಕಾಟ್ ಅವರನ್ನು ಗುರುವಾರ ಚರ್ಚ್‌ನ ಮಾಜಿ ಸಹಾಯಕ ಜಾನಿ ಇರಿದು ಪರಾರಿಯಾಗಿದ್ದ. ಥೇಲಕ್ಕಾಟ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಮೃತಪಟ್ಟಿದ್ದರು.

ಜಾನ್ ಅವರನ್ನು ದುರ್ನಡತೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಚರ್ಚ್‌ನ ಕೆಲಸದಿಂದ ವಜಾ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News