ಮೋದಿಗೆ ಸತ್ಯಮೇವ ಜಯತೆಯ ಅರ್ಥ ಗೊತ್ತಿಲ್ಲ: ರಾಹುಲ್ ಗಾಂಧಿ

Update: 2018-03-21 16:54 GMT

ಚಿಕ್ಕಮಗಳೂರು, ಮಾ.21: ಸತ್ಯಮೇವ ಜಯತೆಯ ಅರ್ಥ ಸಣ್ಣ ಮಕ್ಕಳಿಗೂ ತಿಳಿದಿರುತ್ತದೆ, ಆದರೆ ದುರದೃಷ್ಟವಶಾತ್ ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಚಿಕ್ಕಮಗಳೂರಿನ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಶ್ರಿಂಗೇರಿ ಮಠಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಮಕ್ಕಳಿಗೆ ಧರ್ಮದ ಬಗ್ಗೆ ತಿಳಿಸಿಕೊಡಲಾಗುತ್ತಿತ್ತು. 14 ವರ್ಷದ ಬಾಲಕನೂ ‘ಸತ್ಯಮೇವ ಜಯತೇ’ ಎಂದು ಹೇಳಿದ್ದ. ಆದರೆ ದೇಶದ ಪ್ರಧಾನ ಮಂತ್ರಿಗೆ ಅದರ ಅರ್ಥವೇ ಗೊತ್ತಿಲ್ಲ” ಎಂದವರು ಹೇಳಿದರು.

“ಅಧಿಕಾರಕ್ಕೆ ಬಂದ ಮೇಲೆ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಅವರು ಹೇಳಿದ್ದರು. ಆ ಹಣ ಎಲ್ಲಿದೆ. ಮೋದಿ ಬಸವಣ್ಣರ ಬಗ್ಗೆ ಮಾತನಾಡುತ್ತಾರೆ. ಆದರೆ ಬಸವಣ್ಣನ ಸತ್ಯದ ಬಗೆಗಿನ ಬೋಧನೆಗಳು ಅವರಿಗೆ ತಿಳಿದಿಲ್ಲ” ಎಂದು ರಾಹುಲ್ ಟೀಕಿಸಿದರು,

“ಕರ್ನಾಟಕಕ್ಕೆ ಬಂದ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ವೇದಿಕೆಯಲ್ಲಿ ಅವರ ಬಳಿ ಕುಳಿತವರು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋಗಿ ಬಂದವರು” ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News