ಎನ್ ಡಿಎಯ ನರನಾಡಿಗಳಲ್ಲಿ ‘ಶುದ್ಧ ಹಿಂದೂ ರಕ್ತ’ ಹರಿಯುತ್ತಿದ್ದರೆ ಸಾವರ್ಕರ್ ಗೆ ‘ಭಾರತ ರತ್ನ’ ಘೋಷಿಸಲಿ
Update: 2018-05-13 17:11 GMT
ಹೊಸದಿಲ್ಲಿ, ಮೇ 13: ಕೇಂದ್ರದಲ್ಲಿರುವ ಎನ್ ಡಿಎ ಸರಕಾರದ ನರನಾಡಿಗಳಲ್ಲಿ ‘ಶುದ್ಧ ಹಿಂದೂ ರಕ್ತ’ ಹರಿಯುತ್ತಿದ್ದರೆ ಅದು ವಿ.ಡಿ.ಸಾವರ್ಕರ್ ರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಆಗ್ರಹಿಸಿದ್ದಾರೆ.
ಎನ್ ಡಿಎ ಸರಕಾರವು ದೇಶಾದ್ಯಂತ ಇರುವ ತನ್ನ ಕಚೇರಿಗಳಲ್ಲಿ ಭಾರತೀಯ ಜನಸಂಘದ ಸ್ಥಾಪಕ ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಗಳನ್ನು ಪ್ರದರ್ಶಿಸುತ್ತದೆ. ಆದರೆ ಸಾವರ್ಕರ್ ರಿಗೆ ಅಲ್ಲಿ ಜಾಗವೇ ಇಲ್ಲ ಎಂದು ರಾವತ್ ಹೇಳಿದರು.
“ತನ್ನದು ಶುದ್ಧ ಹಿಂದೂ ರಕ್ತವೆಂದಾದರೆ ಈ ಸರಕಾರವು ಸಾವರ್ಕರ್ ರಿಗೆ ಭಾರತ ರತ್ನವನ್ನು ಘೋಷಿಸಬೇಕು. ಇಲ್ಲದೇ ಹೋದಲ್ಲಿ ತನ್ನ ಹಿಂದುತ್ವ ಕೇವಲ ರಾಜಕೀಯ ಎಂದು ಅದು ಘೋಷಿಸಬೇಕು” ಎಂದು ರಾವತ್ ಹೇಳಿದರು.