ಜಿತು ಜೋಸೆಫ್ ಬಾಲಿವುಡ್ ಚಿತ್ರಕ್ಕೆ ಇಮ್ರಾನ್ ನಾಯಕ

Update: 2018-05-26 13:06 GMT

ದೃಶ್ಯಂ ಇಡೀ ಭಾರತೀಯ ಚಿತ್ರರಂಗವನ್ನೇ ಮಲಯಾಳಂ ಸಿನೆಮಾ ರಂಗದೆಡೆಗೆ ತಿರುಗಿ ನೋಡುವಂತೆ ಮಾಡಿದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಈ ಚಿತ್ರದ ನಿರ್ದೇಶಕ ಜಿತು ಜೋಸೆಫ್ ಶೀಘ್ರದಲ್ಲೇ ಬಾಲಿವುಡ್ ಚಿತ್ರರಂಗ ಪ್ರವೇಶಿಸಲಿದ್ದಾರೆ. ಹೌದು. ಹಾರರ್, ರಹಸ್ಯ ಹಾಗೂ ಥ್ರಿಲ್ಲರ್ ಕಥಾವಸ್ತುವಿರುವ ಹಿಂದಿ ಚಿತ್ರ ವೊಂದನ್ನು ನಿರ್ದೇಶಿಸಲು ಅವರೀಗ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇಮ್ರಾನ್ ಹಾಗೂ ರಿಶಿಕಪೂರ್ ಈ ಚಿತ್ರದಲ್ಲಿ ನಟಿಸಲಿದ್ದಾರೆಂದು ಸ್ವತಃ ಜಿತು ಜೋಸೆಫ್ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ತುಸು ಮಂಕಾದಂತೆ ಕಂಡುಬರುತ್ತಿರುವ ಇಮ್ರಾನ್ ಹಾಶ್ಮಿಗೆ ಈ ಚಿತ್ರ ಹೊಸ ಇಮೇಜ್ ತಂದುಕೊಡುವ ನಿರೀಕ್ಷೆಯಿದೆ. ಇಮ್ರಾನ್ ಹಾಶ್ಮಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಜಿತುನಿರ್ದೇಶನದ ಈ ಚಿತ್ರ, ಬಾಲಿವುಡ್‌ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದೆಯೆಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಮೇ ನಿಂದ ಜುಲೈ ತಿಂಗಳೊಳಗೆ ಒಂದೇ ಶೆಡ್ಯೂಲ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಚಿತ್ರ ಪೂರ್ಣಗೊಂಡ ಬಳಿಕ ಜಿತು ಅವರು ಮಲಯಾಳಂನ ಜನಪ್ರಿಯ ನಟ ಜಯರಾಂ ಅವರ ಪುತ್ರ ಕಾಳಿದಾಸ್ ಅಭಿನಯದ ಮಲಯಾಳಂ ಚಿತ್ರದ ನಿರ್ದೇಶನವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಜೀತು ಅವರು ಇತ್ತೀಚಿನ ಚಿತ್ರ ಆದಿ, ಈ ವರ್ಷದ ಸೂಪರ್‌ಹಿಟ್ ಮಲಯಾಳಂ ಚಿತ್ರಗಳಲ್ಲೊಂದೆನಿಸಿದೆ. ಪ್ರಣವ್ ಮೋಹನ್‌ಲಾಲ್ ಅಭಿನಯದ ಈ ಚಿತ್ರ ಇತ್ತೀಚೆಗಷ್ಟೇ ಶತಮಾನೋತ್ಸವ ಆಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News