ನಟಿಯ ಅಪಹರಣ, ಕಿರುಕುಳ ಪ್ರಕರಣ: ಹೈಕೋರ್ಟ್‌ಗೆ ಮನವಿ ಸಲ್ಲಿಸಿದ ನಟ ದಿಲೀಪ್

Update: 2018-06-14 18:12 GMT

ಕೊಚ್ಚಿ, ಜೂ. 14: ನಟಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ, ಜನಪ್ರಿಯ ಮಲಯಾಳಂ ನಟ ದಿಲೀಪ್ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಕೇರಳ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

 ಕೇರಳ ಪೊಲೀಸ್‌ನ ವಿಶೇಷ ತನಿಖಾ ತಂಡ (ಸಿಟ್) ಈ ಪ್ರಕರಣವನ್ನು ಪಕ್ಷಪಾತದಿಂದ ತನಿಖೆ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.

 ಅಪರಾಧ ನಡೆಸಿದವರೊಂದಿಗೆ ಸಂಬಂಧ ಹೊಂದಿದ್ದ ಆರೋಪಿ ವ್ಯಕ್ತಿಗಳು ನೀಡಿದ ತಪ್ಪು ಆರೋಪ ಹಾಗೂ ತಿರುಚಿದ ವಿಚಾರವನ್ನು ಸಿಟ್ ‘ಒಡಂಬಡಿಕೆ ಸತ್ಯ’ ಎಂಬಂತೆ ಸ್ವೀಕರಿಸಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಪೊಲೀಸ್ ನಿಯಂತ್ರಿಸದ ಸ್ವತಂತ್ರ ಸಂಸ್ಥೆಯಿಂದ ಈ ಪ್ರಕರಣದ ತನಿಖೆ ನಡೆದರೆ ಸತ್ಯಾಂಶ ಹೊರಗೆ ಬರಬಹುದು ಎಂದು ನಟ ದಿಲೀಪ್ ಮನವಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News