ಒಂದೇ ಕುಟುಂಬದ 11 ಮಂದಿ ನಿಗೂಢ ಸಾವು

Update: 2018-07-01 04:58 GMT

ಹೊಸದಿಲ್ಲಿ, ಜು.1: ಒಂದೇ ಕುಟುಂಬದ 11 ಮಂದಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ದಿಲ್ಲಿಯ ಬುರಾರಿಯ ಮನೆಯೊಂದರಲ್ಲಿ ರವಿವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.

ಮೃತಪಟ್ಟವರಲ್ಲಿ ನಾಲ್ವರು ಪುರುಷರು ಮತ್ತು ಏಳು ಮಂದಿ ಮಹಿಳೆಯರು ಸೇರಿದ್ದಾರೆ.

ಗುರುಗೋವಿಂದ್ ಆಸ್ಪತ್ರೆಯ ಬಳಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಭಾಟಿಯಾ ಕುಟುಂಬ ರಾಜಸ್ಥಾನ ಮೂಲದವರೆಂದು ಹೇಳಲಾಗಿದ್ದು, ನಗರದಲ್ಲಿ  ದಿನಸಿ ಅಂಗಡಿ ಹೊಂದಿದ್ದಾರೆ. ತೀವ್ರ ಹಣಕಾಸಿನ ಮುಗ್ಗಟ್ಟಿನಿಂದ ಕಂಗಾಲಾದ  ಕುಟುಂಬ ಆತ್ಮಹತ್ಯೆ ಮಾಡಲು  ಕಾರಣವೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ದೆತ್ ನೋಟ್ ಪತ್ತೆಯಾಗಿಲ್ಲ. ರಾತ್ರಿ 11:45ರ ತನಕ ಇವರ ಅಂಗಡಿ ತೆರದಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ

ಆತ್ಮಹತ್ಯೆಗೆ ಶರಣಾದವರಲ್ಲಿ ಓರ್ವ ವೃದ್ಧೆ, ಇಬ್ಬರು ಮಕ್ಕಳು ಮತ್ತು ಅವರ ಪತ್ನಿಯರು, 16ರಿಂದ 17 ಹರೆಯದ ಇಬ್ಬರು ಹುಡುಗರು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. ನೆರೆಮನೆಯೊಬ್ಬರು ಹಾಲು ಖರೀದಿಸಲು ಬೆಳಗ್ಗೆ ಅಂಗಡಿಗೆ ಹೋದಾಗ ಅಂಗಡಿ ಬಾಗಿಲು ಮುಚ್ಚಿತ್ತು. ಬಳಿಕ ಅವರ ಮನೆಯ ಕಡೆಗೆ ತೆರಳಿದಾಗ ಮನೆಯ ಬಾಗಿಲು ಮುಚ್ಚಿದ್ದು, ಸಂಶಯಗೊಂಡು ಮೇಲಂತಸ್ತಿಗೆ ಹೋಗಿ ನೋಡಿದಾಗ  ಪ್ರಕರಣ ಬೆಳಕಿಗೆ ಬಂದಿದೆ , ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದರೆನ್ನಲಾಗಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News