ತಂಪು ನೀರಿಗಾಗಿ ಆರಂಭಗೊಂಡ ಜಗಳ ಯುವಕನ ಕೊಲೆಯಲ್ಲಿ ಅಂತ್ಯ
Update: 2018-07-12 15:43 GMT
ಹೊಸದಿಲ್ಲಿ, ಜು. 12: ತಂಪು ನೀರು ನೀಡುವ ಕುರಿತು ನಡೆದ ಜಗಳದಲ್ಲಿ 20 ವರ್ಷದ ಯುವಕನೋರ್ವನನ್ನು ಆತನ ಗೆಳೆಯನೇ ಇರಿದು ಹತ್ಯೆಗೈದ ಘಟನೆ ವಾಯುವ್ಯ ದಿಲ್ಲಿಯ ಭಾರತ್ ನಗರದಲ್ಲಿ ಗುರುವಾರ ನಡೆದಿದೆ. ಈ ಘಟನೆ ಜುಲೈ 11 ಹಾಗೂ 12 ನಡುವೆ ರಾತ್ರಿ ಸಂಭವಿಸಿದೆ. ಮೃತಪಟ್ಟ ಯುವಕನನ್ನು ಜಹಾಂಗಿರಿಪುರಿಯ ನಿವಾಸಿ ಸಾಗರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಗರ್ ತನ್ನ ಪತ್ನಿಯೊಂದಿಗೆ ಗೆಳೆಯ ಗೌರವ್ನನ್ನು ಭೇಟಿಯಾಗರಲು ಜೆ.ಜೆ. ಕಾಲನಿಯಲ್ಲಿರುವ ಆತನ ಮನೆಗೆ ತೆರಳಿದ್ದರು. ಅಂದು ಸೆಕೆ ಇದ್ದುದರಿಂದ ಸಾಗರ್ ಕುಡಿಯಲು ತಂಪು ನೀರು ಕೇಳಿದ್ದ. ಇದೇ ಕಾರಣಕ್ಕೆ ಸಾಗರ್ ಹಾಗೂ ಗೌರವ್ ನಡುವಿನ ಜಗಳ ನಡೆಯಿತು. ಆಕ್ರೋಶಿತನಾದ ಗೌರವ್ ಗೆಳೆಯ ಸಾಗರ್ಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.