ವಿಷಾನಿಲ ಸೇವಿಸಿ ನಾಲ್ವರು ಮೃತ್ಯು

Update: 2018-07-18 15:44 GMT

ಕುರುಕ್ಷೇತ್ರ(ಹರ್ಯಾಣ),ಜು.18: ಜಿಲ್ಲೆಯ ಅಮಿನ್ ಗ್ರಾಮದಲ್ಲಿ ಬುಧವಾರ 10 ಅಡಿ ಆಳದ ಜೈವಿಕ ಅನಿಲ ಸ್ಥಾವರದ ಚೇಂಬರ್‌ನಲ್ಲಿ ವಿಷಾನಿಲ ಸೇವನೆಯಿಂದ ತಂದೆ ಮತ್ತು ಇಬ್ಬರು ಪುತ್ರರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.

ಬಲದೇವ ಸಿಂಗ್,ಪುತ್ರರಾದ ದೇವಿಂದರ್ ಸಿಂಗ್ ಮತ್ತು ರೂಪಿಂದರ್ ಸಿಂಗ್ ಹಾಗೂ ಸೋದರ ಸಂಬಂಧಿ ಜೋಗಿಂದರ್ ಸಿಂಗ್ ಮೃತರು.

 ಸೋರಿಕೆಯಿಂದಾಗಿ ಬಲದೇವ ಸಿಂಗ್ ತನ್ನ ಹೊಲದ ಬಳಿ ನಿರ್ಮಿಸಿದ್ದ ಜೈವಿಕ ಅನಿಲ ಸ್ಥಾವರ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಅದನ್ನು ಪರಿಶೀಲಿಸಲೆಂದು ಚೇಂಬರ್‌ಗಿಳಿದಿದ್ದ ದೇವಿಂದರ್ ಸಿಂಗ್ ಹೊರಗೆ ಬಂದಿರಲಿಲ್ಲ. ನಂತರ ಉಳಿದವರೂ ಕೆಳಗೆ ಇಳಿದಿದ್ದು, ಎಲ್ಲರೂ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News