ಪಿಎನ್‌ಬಿ ವಂಚನೆ ಪ್ರಕರಣ: ಅಲಹಾಬಾದ್ ಬ್ಯಾಂಕ್ ಮಾಜಿ ಆಡಳಿತ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್‌ಗೆ ಜಾಮೀನು

Update: 2018-08-20 15:03 GMT

ಮುಂಬೈ,ಆ.20: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ನಲ್ಲಿ 14,000 ಕೋ.ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಬ್ಯಾಂಕಿನ ಮಾಜಿ ಆಡಳಿತ ನಿರ್ದೇಶಕಿ ಮತ್ತು ಸಿಇಒ ಉಷಾ ಅನಂತಸುಬ್ರಮಣಿಯನ್ ಅವರಿಗೆ ಇಲ್ಲಿಯ ವಿಶೇಷ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಉಷಾ ಅನಂತಸುಬ್ರಮಣಿಯನ್ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲು ರಾಷ್ಟ್ರಪತಿಗಳು ಈ ತಿಂಗಳ ಆರಂಭದಲ್ಲಿ ಅನುಮತಿಯನ್ನು ನೀಡಿದ ಬಳಿಕ ನ್ಯಾಯಾಲಯವು ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಸೋಮವಾರ ವಿಶೇಷ ನ್ಯಾಯಾಧೀಶ ಜೆ.ಸಿ.ಜಗದಾಳೆ ಅವರೆದುರು ಹಾಜರಾಗಿದ್ದ ಅವರು ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಸರಕಾರವು ಆ.14ರಂದು ಉಷಾ ಅನಂತಸುಬ್ರಮಣಿಯನ್ ಅವರನ್ನು ಹುದ್ದೆಯಿಂದ ವಜಾಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News