ಡಿಎನ್‌ಎ ಪರೀಕ್ಷೆ ನಡೆಸದೆ ನೇತಾಜಿ ಚಿತಾಭಸ್ಮ ಸ್ವೀಕರಿಸುವುದಿಲ್ಲ: ನೇತಾಜಿ ಮೊಮ್ಮಗ ಸಿ.ಕೆ.ಬೋಸ್

Update: 2018-08-20 16:17 GMT

ಕೋಲ್ಕತಾ, ಆ.20: ಜಪಾನಿನ ದೇವಸ್ಥಾನದಲ್ಲಿ ಇರಿಸಲಾಗಿದೆ ಎನ್ನಲಾಗಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ದೇಹದ ಸಂಭಾವ್ಯ ಅವಶೇಷಗಳನ್ನು ಹಾಗೂ ಚಿತಾಭಸ್ಮವನ್ನು ಡಿಎನ್‌ಎ ಪರೀಕ್ಷೆಯ ವಿನಃ ಸ್ವೀಕರಿಸುವುದಿಲ್ಲ ಎಂದು ಪಶ್ಚಿಮಬಂಗಾಳ ಬಿಜೆಪಿ ಉಪಾಧ್ಯಕ್ಷ ಹಾಗೂ ನೇತಾಜಿಯವರ ಮೊಮ್ಮಗ ಚಂದ್ರಕುಮಾರ್ ಬೋಸ್ ಹೇಳಿದ್ದಾರೆ. ನೇತಾಜಿಯವರ ಅವಶೇಷಗಳನ್ನು ಭಾರತಕ್ಕೆ ತರಬೇಕು ಎಂದು ನೇತಾಜಿ ಪುತ್ರಿ ಅನಿತಾ ಬೋಸ್ ಭಾರತ ಹಾಗೂ ಜಪಾನ್ ಸರಕಾರಕ್ಕೆ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಚಂದ್ರಕುಮಾರ್ ಬೋಸ್ ಈ ಹೇಳಿಕೆ ನೀಡಿದ್ದಾರೆ.

ದೇಶ ಹಾಗೂ ಬೋಸ್ ಕುಟುಂಬದ ಬಹುತೇಕ ಮಂದಿ ನೇತಾಜಿಯವರ ದೇಹದ ಅವಶೇಷದ ಡಿಎನ್‌ಎ ಪರೀಕ್ಷೆ ನಡೆಸದೆ ಅದನ್ನು ಸ್ವೀಕರಿಸಲು ಒಪ್ಪಲಾರರು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News