ದ್ವೇಷಕಾರುವವರೊಂದಿಗೆ ದ್ವೇಷದಲ್ಲಿ ಪ್ರತಿಕ್ರಿಯಿಸುವುದು ಮೂರ್ಖತನ

Update: 2018-08-22 18:20 GMT

ಹೊಸದಿಲ್ಲಿ, ಆ.22: ಒಬ್ಬರು ನಿಮ್ಮನ್ನು ದ್ವೇಷಿಸುತ್ತಿದ್ದರೆ, ದ್ವೇಷದ ಭಾವನೆಯಲ್ಲಿ ಏನಾದರೂ ಮಾಡುತ್ತಿದ್ದರೆ ದ್ವೇಷದೊಂದಿಗೆ ಅವರಿಗೆ ಪ್ರತಿಕ್ರಿಯಿಸುವುದು ಮೂರ್ಖತನ. ಅದು ಯಾವುದೇ ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಜರ್ಮನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೋದಿಯನ್ನು ಅಪ್ಪಿಕೊಂಡದ್ದೇಕೆ ಎನ್ನುವ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

“ಭಾರತದಲ್ಲಿ ನಿರುದ್ಯೋಗದ ಸಮಸ್ಯೆಯಿದೆ. ಆದರೆ ಇದನ್ನು ತಿಳಿಯಲು ಪ್ರಧಾನಿ ಮೋದಿ ನಿರಾಕರಿಸುತ್ತಿದ್ದಾರೆ. ಅವರು ನೋಟು ನಿಷೇಧವನ್ನು ಹೇರಿ ಆರ್ಥಿಕತೆಯಲ್ಲಿದ್ದ ನಗದು ಚಲಾವಣೆಯನ್ನು ನಾಶಗೊಳಿಸಿ ಲಕ್ಷಾಂತರ ಮಂದಿಯನ್ನು ನಿರುದ್ಯೋಗಿಯನ್ನಾಗಿಸಿದರು” ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News