ಕೇರಳ ಸಂತ್ರಸ್ತರಿಗೆ 1,200 ಕೆ.ಜಿ. ಅಕ್ಕಿ ನೀಡಿದ ಸನ್ನಿ ಲಿಯೋನ್

Update: 2018-08-24 16:56 GMT

ಮುಂಬೈ, ಆ.24: ಇತಿಹಾಸ ಕಂಡು ಕೇಳರಿಯದಷ್ಟು ಭೀಕರ ಪ್ರವಾಹ ಕೇರಳವನ್ನು ಜರ್ಜರಿತಗೊಳಿಸಿದ್ದು, 300ಕ್ಕೂ ಹೆಚ್ಚು ಮಂದಿಯ ಬಲಿ ಪಡೆದಿದೆ. 15 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರಗೊಂಡಿದ್ದಾರೆ. ಕೇರಳ ಪುನಶ್ಚೇತನಕ್ಕೆ ನೆರವು ಕೂಡಾ ವ್ಯಾಪಕವಾಗಿ ಹರಿದುಬರುತ್ತಿದ್ದು, ಬಾಲಿವುಡ್ ತಾರೆಯರು ನಾ ಮುಂದು ತಾ ಮುಂದು ಎಂಬಂತೆ ಸಹಾಯಹಸ್ತ ಚಾಚಿದ್ದಾರೆ.

ಶಾರೂಖ್ ಖಾನ್, ಹೃತಿಕ್ ರೋಶನ್, ಫರ್ಹಾನ್ ಅಖ್ತರ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಸುಶಾಂತ್ ಸಿಂಗ್ ರಜಪೂತ್, ಅನುಷ್ಕಾ ಶರ್ಮಾ ಈಗಾಗಲೇ ನೆರವು ಘೋಷಿಸಿದ್ದು, ಕೇರಳ ಜನರ ನೆರವಿಗೆ ಧಾವಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. ಇದೀಗ ಈ ಪಟ್ಟಿಗೆ ಸನ್ನಿ ಲಿಯೋನ್ ಮತ್ತು ಆಕೆಯ ಪತಿ ಡೇನಿಯಲ್ ವೆಬೆರ್ ಹೊಸ ಸೇರ್ಪಡೆ.

ಬಾಲ್ಯಸ್ನೇಹಿತರಾದ ಪ್ರತೀಕ್ ಬಬ್ಬರ್ ಹಾಗೂ ಸಿದ್ಧಾರ್ಥ್ ಕಪೂರ್ ಅವರು ಹೋಟೆಲ್ ಉದ್ಯಮಿ ಸುವೇದ್ ಲೋಹಿಯಾ ಜತೆ ಸೇರಿ, ನಿಧಿ ಕ್ರೋಢೀಕರಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಕೇರಳ ಪರಿಹಾರ ನಿಧಿಗೆ ಸನ್ನಿ ಲಿಯೋನ್ ಕೂಡಾ 1,200 ಕೆಜಿ ಅಕ್ಕಿ ಮತ್ತು ಬೇಳೆ ನೀಡುವುದಾಗಿ ಇನ್‍ಸ್ಟಾಗ್ರಾಂ ಪೋಸ್ಟ್‍ನಲ್ಲಿ ಘೋಷಿಸಿದ್ದಾರೆ. “ಅವರಿಗೆ ಎಷ್ಟು ಬೇಕೋ ಅಷ್ಟು ಸಾಲದು ಎನ್ನುವುದು ನನಗೆ ಗೊತ್ತು. ಇನ್ನಷ್ಟು ನೆರವು ನೀಡುವ ಆಸೆ ನನ್ನದು” ಎಂದು ಹೇಳಿದ್ದಾರೆ. ಸನ್ನಿ ಪತಿ ಡೇನಿಯಲ್ ವೆಬೆರ್ ಕೂಡಾ ಸಾಮಾಜಿಕ ಜಾಲತಾಣದ ಪೋಸ್ಟ್‍ನಲ್ಲಿ ಈ ವಿಷಯ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News