ಡಿಎಂಕೆಗೆ ಮರು ಸೇರ್ಪಡೆಗೊಳಿಸದೇ ಇದ್ದರೆ ಪರಿಣಾಮ ಎದುರಿಸಿ: ಅಳಗಿರಿ ಎಚ್ಚರಿಕೆ
ಮಧುರೈ, ಆ. 27: ಡಿಎಂಕೆಯ ಅಧ್ಯಕ್ಷರಾಗಿ ಎಂ.ಕೆ. ಸ್ಟಾಲಿನ್ ಆಯ್ಕೆ ಆಗಲು ಕೆಲವು ದಿನಗಳು ಇರುವಾಗ, ದಿವಂಗತ ಕರುಣಾನಿಧಿ ಅವರ ಪುತ್ರ ಎಂ.ಕೆ. ಅಳಗಿರಿ, ತನ್ನನ್ನು ಪಕ್ಷಕ್ಕೆ ಮರು ಸೇರ್ಪಡೆಗೊಳಿಸಿದೇ ಇದ್ದರೆ ಪರಿಣಾಮ ಎದುರಿಸಬೇಕಾದೀತು ಎಂದು ಪಕ್ಷವನ್ನು ಎಚ್ಚರಿಸಿದ್ದಾರೆ.
‘‘ಒಂದು ವೇಳೆ ಅವರು ನನ್ನನ್ನು ಪಕ್ಷಕ್ಕೆ ಮರು ಸೇರ್ಪಡೆಗೊಳಿಸದೇ ಇದ್ದರೆ, ಪರಿಣಾಮ ಎದುರಿಸ ಬೇಕಾದೀತು.’’ ಎಂದು ತನ್ನ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕರುಣಾನಿಧಿ ಅವರು ನನ್ನನ್ನು ಪಕ್ಷಕ್ಕೆ ಮರು ಸೇರ್ಪಡೆಗೊಳಿಸಲು ಬಯಸಿದ್ದರು. ಸ್ಟಾಲಿನ್ ಹಾಗೂ ಅವರ ಬೆಂಬಲಿಗರಿಗೆ ಶಿಫಾರಸು ಮಾಡಿದ್ದರು ಎಂದು ಅವರು ಹೇಳಿದ್ದಾರೆ.
ಸ್ಟಾಲಿನ್ ಡಿಎಂಕೆಯ ಅಧ್ಯಕ್ಷರಾಗುವ ಬಗ್ಗೆ ಈ ಹಿಂದೆ ಅಳಗಿರಿ ವಿರೋಧಿಸಿದ್ದರು ಹಾಗೂ ಸ್ಟಾಲಿನ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಂದೆಯ ಸಾವಿನ ಒಂದು ತಿಂಗಳ ಬಳಿಕ ಅಳಗಿರಿ, ತನ್ನನ್ನು ನಿರ್ಲಕ್ಷಿಸಿದರೆ ಪಕ್ಷ ಸಂಕಷ್ಟವನ್ನು ಎದುರಿಸಬೇಕಾದಿತು ಎಂದು ಹೇಳಿದ್ದಾರೆ.