ಮುಝಫ್ಫರಪುರ ಆಶ್ರಯಧಾಮ ಲೈಂಗಿಕ ಹಗರಣ: ಸಿಬಿಐನಿಂದ ಹೈಕೋರ್ಟ್‌ಗೆ ತನಿಖೆ ಪ್ರಗತಿ ವರದಿ ಸಲ್ಲಿಕೆ

Update: 2018-08-27 16:43 GMT

ಪಾಟ್ನಾ,ಆ.27: ಮುಝಫ್ಫರಪುರ ಆಶ್ರಯಧಾಮ ಲೈಂಗಿಕ ಹಗರಣ ಕುರಿತು ತನಿಖೆ ಪ್ರಗತಿ ವರದಿಯನ್ನು ಸಿಬಿಐ ಸೋಮವಾರ ಪಾಟ್ನಾ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದೆ.

ತನಿಖೆಯ ಪ್ರಗತಿ ಮತ್ತು ತನಿಖಾ ತಂಡದ ಭಾಗವಾಗಿದ್ದ ಸಿಬಿಐನ ಎಸ್‌ಪಿ ದರ್ಜೆಯ ಅಧಿಕಾರಿ ಜೆ.ಪಿ.ಮಿಶ್ರಾ ಅವರ ವರ್ಗಾವಣೆ ಕುರಿತ ಸ್ಥಿತಿಗತಿ ವರದಿಯನ್ನು ಸಿಬಿಐ ಪರ ವಕೀಲ ಸಂಜಯ ಕುಮಾರ ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು.

ಹಿಂದಿನ ವಿಚಾರಣೆಯ ವೇಳೆ ಈ ವರದಿಯನ್ನು ತನಗೆ ಸಲ್ಲಿಸುವಂತೆ ನ್ಯಾಯಾಲಯವು ಸೂಚಿಸಿತ್ತು.

ಪ್ರಕರಣದ ಮುಂದಿನ ವಿಚಾರಣೆಯು ಮಂಗಳವಾರ ನಡೆಯಲಿದೆ.

ಪ್ರಕರಣದ ತನಿಖೆಯಲ್ಲಿ ಪ್ರಗತಿ ವರದಿಯನ್ನು ಸಲ್ಲಿಸಲು ವೈಫಲ್ಯಕ್ಕಾಗಿ ಆ.23ರಂದು ಸಿಬಿಐ ಅನ್ನು ತರಾಟೆಗೆತ್ತಿಕೊಂಡಿದ್ದ ನ್ಯಾಯಾಲಯವು,ಮಿಶ್ರಾ ಅವರ ವರ್ಗಾವಣೆಗೆ ವಿವರಣೆಯನ್ನು ನೀಡುವಂತೆ ಸೂಚಿಸಿತ್ತು. ಮಿಶ್ರಾ ಅವರನ್ನು ಆ.21ರಂದು ಪಾಟ್ನಾದ ಡಿಐಜಿ ಕಚೇರಿಗೆ ವರ್ಗಾಣೆ ಮಾಡಲಾಗಿತ್ತು. ಇದನ್ನು ಟೀಕಿಸಿದ್ದ ಪ್ರತಿಪಕ್ಷಗಳು,ಇದರಿಂದ ತನಿಖೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಲಿದೆ ಎಂದು ಆರೋಪಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News