ರಾಮ ಮಂದಿರ ನಿರ್ಮಾಣ ದಿನಾಂಕವನ್ನು ಶ್ರೀರಾಮನೇ ನಿರ್ಧರಿಸುತ್ತಾನೆ: ಆದಿತ್ಯನಾಥ್

Update: 2018-09-01 15:02 GMT

ಹೊಸದಿಲ್ಲಿ, ಸೆ.1: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ದಿನಾಂಕವನ್ನು ಶ್ರೀರಾಮನೇ ನಿರ್ಧರಿಸುತ್ತಾನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏನೇನು ಯಾವಾಗ ನಡೆಯಬೇಕೋ ಅದು ನಡೆಯುತ್ತದೆ, ದೇವರೇ ಈ ಬಗ್ಗೆ ನಿರ್ಧರಿಸಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದವರು ಹೇಳಿದರು,

ಈ ಹಿಂದಿನ ಸರಕಾರಗಳು ಅಯೋಧ್ಯೆಗೆ ಭೇಟಿ ನೀಡಲು ಹೆದರುತ್ತಿದ್ದವು. ಆದರೆ ತಾನು ಅಲ್ಲಿಗೆ ಭೇಟಿ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಿಪಕ್ಷಗಳ ‘ಮಹಾಘಟಬಂಧನ’ ವಿಫಲವಾಗಲಿದೆ. ಏಕೆಂದರೆ ನಾಯಕ ಯಾರು ಎನ್ನುವ ವಿಚಾರದಲ್ಲಿ ಅವರ ನಡುವೆ ಸ್ಪಷ್ಟತೆಯಿಲ್ಲ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News