ರಾಮ ಮಂದಿರ ನಿರ್ಮಾಣ ದಿನಾಂಕವನ್ನು ಶ್ರೀರಾಮನೇ ನಿರ್ಧರಿಸುತ್ತಾನೆ: ಆದಿತ್ಯನಾಥ್
Update: 2018-09-01 15:02 GMT
ಹೊಸದಿಲ್ಲಿ, ಸೆ.1: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ದಿನಾಂಕವನ್ನು ಶ್ರೀರಾಮನೇ ನಿರ್ಧರಿಸುತ್ತಾನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏನೇನು ಯಾವಾಗ ನಡೆಯಬೇಕೋ ಅದು ನಡೆಯುತ್ತದೆ, ದೇವರೇ ಈ ಬಗ್ಗೆ ನಿರ್ಧರಿಸಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದವರು ಹೇಳಿದರು,
ಈ ಹಿಂದಿನ ಸರಕಾರಗಳು ಅಯೋಧ್ಯೆಗೆ ಭೇಟಿ ನೀಡಲು ಹೆದರುತ್ತಿದ್ದವು. ಆದರೆ ತಾನು ಅಲ್ಲಿಗೆ ಭೇಟಿ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ವಿಪಕ್ಷಗಳ ‘ಮಹಾಘಟಬಂಧನ’ ವಿಫಲವಾಗಲಿದೆ. ಏಕೆಂದರೆ ನಾಯಕ ಯಾರು ಎನ್ನುವ ವಿಚಾರದಲ್ಲಿ ಅವರ ನಡುವೆ ಸ್ಪಷ್ಟತೆಯಿಲ್ಲ ಎಂದವರು ಹೇಳಿದರು.