ಸೆಪ್ಟಿಕ್ ಟ್ಯಾಂಕ್‌ನಲ್ಲಿ ಉಸಿರುಗಟ್ಟಿ ಐವರ ಸಾವು

Update: 2018-09-02 15:29 GMT

ಕೋರಾಪತ್,ಸೆ.2: ನಿರ್ಮಾಣ ಹಂತದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಇಳಿದಿದ್ದ ಓರ್ವ ಮಹಿಳೆ ಸೇರಿದಂತೆ ಐವರು ಉಸಿರುಗಟ್ಟಿ ಸಾವನ್ನಪ್ಪಿದ್ದು,ಇನ್ನೋರ್ವ ಪ್ರಜ್ಞಾಹೀನನಾದ ಘಟನೆ ರವಿವಾರ ಒಡಿಶಾದ ರಾಯಗಡ ಜಿಲ್ಲೆಯ ದುರ್ಗಿ ಗ್ರಾಮದಲ್ಲಿ ಸಂಭವಿಸಿದೆ.

ಮೊದಲು ಸೆಪ್ಟಿಕ್ ಟ್ಯಾಂಕ್‌ನಲ್ಲಿಳಿದಿದ್ದ ಮಹಿಳೆ ಒಳಗೆ ಸಿಕ್ಕಿಬಿದ್ದಾಗ ಆಕೆಯ ರಕ್ಷಣೆಗೆಂದು ಇತರ ಐವರು ಒಬ್ಬರಾದ ಬಳಿಕ ಒಬ್ಬರಂತೆ ಕೆಳಗಿಳಿದಿದ್ದರು. ಎಲ್ಲರೂ ಉಸಿರುಗಟ್ಟಿ ಅಪಾಯಕ್ಕೆ ಸಿಲುಕಿದ್ದು,ಗ್ರಾಮಸ್ಥರು ಟ್ಯಾಂಕಿನ ಮೇಲಿದ್ದ ಕೆಲವು ಕಾಂಕ್ರೀಟ್ ಸ್ಲಾಬ್‌ಗಳನ್ನು ಕಿತ್ತುಹಾಕಿದ ಬಳಿಕವಷ್ಟೇ ಅವರನ್ನು ಮೇಲಕ್ಕೆ ತರಲು ಸಾಧ್ಯವಾಗಿತ್ತು.

ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಐವರು ಅದಾಗಲೇ ಕೊನೆಯುಸಿರೆಳೆದಿದ್ದರು. ಓರ್ವ ಪ್ರಜ್ಞಾಹೀನನಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ ಎಂದು ಎಎಸ್‌ಪಿ ವೈ.ಜಗನ್ನಾಥ ರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News