ಹಿಂದೂ ನಾಯಕರ ಹತ್ಯೆಗೆ ಸಂಚು: 5 ಆರೋಪಿಗಳ ಬಂಧನ

Update: 2018-09-03 14:08 GMT

ಕೊಯಂಬತ್ತೂರು, ಸೆ.3: ಹಿಂದೂ ನಾಯಕರ ಹತ್ಯೆಗೆ ಸಂಚು ರೂಪಿಸಿದ ಆರೋಪದಡಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದು ಮಕ್ಕಳ ಕಚ್ಚಿ(ಎಚ್‌ಎಂಕೆ) ಮುಖಂಡ ಅರ್ಜುನ್ ಸಂಪತ್ ಹಾಗೂ ಹಿಂದು ಮನ್ನಣಿ ಸಂಘಟನೆಯ ಮುಖಂಡ ಮೂಕಾಂಬಿಕೈ ಮಣಿ ಸೇರಿದಂತೆ ಹಲವರನ್ನು ಹತ್ಯೆ ಮಾಡಲು ಬಂಧಿತ ಆರೋಪಿಗಳು ಸಂಚು ಹೂಡಿದ್ದರು. ಆಶಿಕ್, ಜಾಫರ್ ಸಾದಿಕ್ ಆಲಿ, ಎಸ್. ಇಸ್ಮಾಯಿಲ್, ಎಸ್.ಶಂಸುದ್ದೀನ್ ಮತ್ತು ಶಲಾವುದ್ದೀನ್‌ರನ್ನು ಕೊಯಂಬತ್ತೂರು ಪೊಲೀಸ್ ವಿಶೇಷ ತನಿಖಾ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.

ಖಚಿತ ಮಾಹಿತಿಯಂತೆ ಈ ಆರೋಪಿಗಳನ್ನು ಶನಿವಾರ ಚೆನ್ನೈಯಿಂದ ಕೊಯಂಬತ್ತೂರಿಗೆ ಆಗಮಿಸಿದ ಸಂದರ್ಭ ಬಂಧಿಸಲಾಗಿದೆ. ಇವರನ್ನು ಕರೆದೊಯ್ಯಲು ಬಂದಿದ್ದ ವ್ಯಕ್ತಿಯನ್ನೂ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ . ಆರೋಪಿಗಳ ಬಂಧನಕ್ಕೂ ಮೊದಲು ಅವರನ್ನು 24 ಗಂಟೆ ನಿರಂತರ ವಿಚಾರಣೆ ನಡೆಸಲಾಗಿದ್ದು ಕ್ಷಿಪ್ರ ನ್ಯಾಯಾಲಯ ಆರೋಪಿಗಳಿಗೆ ಸೆ.4ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News