ಪಾಕ್ ಜೊತೆಗಿನ ಮಾತುಕತೆ ರದ್ದುಗೊಳಿಸಿದ ಭಾರತ
Update: 2018-09-21 14:55 GMT
ಹೊಸದಿಲ್ಲಿ, ಸೆ.21: ನ್ಯೂಯಾರ್ಕ್ ನಲ್ಲಿ ನಡೆಯಲಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ಶಾ ಮಹ್ಮೂದ್ ಖುರೇಷಿ ನಡುವಿನ ಮಾತುಕತೆಯನ್ನು ಭಾರತವು ಇಂದು ರದ್ದುಗೊಳಿಸಿದೆ.
ಗಡಿ ಪ್ರದೇಶದಲ್ಲಿ ಭಾರತೀಯ ಸೈನಿಕರ ಹತ್ಯೆ ಮತ್ತು ಬುರ್ಹಾನಿ ವಾನಿಯ ಸ್ಟ್ಯಾಂಪ್ ಗಳನ್ನು ಪಾಕಿಸ್ತಾನ ಬಿಡುಗಡೆಗೊಳಿಸಿರುವುದನ್ನು ಖಂಡಿಸಿರುವ ವಿದೇಶಾಂಗ ಸಚಿವಾಲಯ, “ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ರ ನಿಜ ಬಣ್ಣ ಬಯಲಾಗಿದೆ” ಎಂದಿದೆ.