ಕಾರು ಅಪಘಾತ: ಗಾಯಕ ಬಾಲಭಾಸ್ಕರ್, ಪತ್ನಿ ಗಂಭೀರ; ಮಗು ಮೃತ್ಯು

Update: 2018-09-25 07:26 GMT

ಹೊಸದಿಲ್ಲಿ, ಸೆ.25: ಸಂಗೀತ ನಿರ್ದೇಶಕ ಮತ್ತು ಹಾಡುಗಾರ ಬಾಲಭಾಸ್ಕರ್ ಹಾಗು ಕುಟುಂಬ ಸದಸ್ಯರಿದ್ದ ಕಾರು ಅಪಘಾತಕ್ಕೊಳಗಾಗಿದ್ದು, ಘಟನೆಯಲ್ಲಿ ಅವರ ಮಗು ಮೃತಪಟ್ಟಿರುವುದಾಗಿ ವರದಿಯಾಗಿದೆ. ಪಲ್ಲಿಪುರಂನಲ್ಲಿ ಘಟನೆ ನಡೆದಿದ್ದು, ಬಾಲಭಾಸ್ಕರ್ ಮತ್ತು ಪತ್ನಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕಾರು ಚಾಲಕ ಅರ್ಜುನ್ ಕೂಡ ಗಾಯಗೊಂಡಿದ್ದಾರೆ. ತ್ರಿಶೂರಿನ ದೇವಸ್ಥಾನವೊಂದಕ್ಕೆ ತೆರಳಿ ಕುಟುಂಬ ಮರಳಿ ಬರುತ್ತಿತ್ತು ಎನ್ನಲಾಗಿದೆ. “ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೊಳಗಾಗಿರಬಹುದು” ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News