ಬಿಜೆಪಿ ಹಿಂದೂಗಳ ಹಿತೈಷಿಯಲ್ಲ ಎಂದ ಕೇಜ್ರಿವಾಲ್

Update: 2018-09-30 15:54 GMT

ಹೊಸದಿಲ್ಲಿ, ಸೆ.30: ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ವಿವೇಕ್ ತಿವಾರಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿಯು ಹಿಂದೂಗಳ ಹಿತೈಷಿಯಲ್ಲ ಎಂದಿದ್ದಾರೆ.

“ನೀವು ವಿವೇಕ್ ತಿವಾರಿ, ಓರ್ವ ಹಿಂದೂವನ್ನೇಕೆ ಕೊಂದಿದ್ದೀರಿ? ಬಿಜೆಪಿ ನಾಯಕರು ಸ್ವತಂತ್ರವಾಗಿ ಮಹಿಳೆಯರ ಅತ್ಯಾಚಾರ ಮಾಡುತ್ತಿದ್ದಾರೆ. ನಿಮ್ಮ ಕಣ್ಣನ್ನು ತೆರೆಯಿರಿ. ಬಿಜೆಪಿ ಹಿಂದೂಗಳ ಹಿತೈಷಿಯಲ್ಲ. ಅಧಿಕಾರ ಹಿಡಿಯಲು ಎಲ್ಲಾ ಹಿಂದೂಗಳನ್ನು ಕೊಲ್ಲುವ ಮೊದಲು ಅವರು ಯೋಚಿಸಲಾರರು” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.

ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ತಿವಾರಿಯವರ ಪತ್ನಿ ಕಲ್ಪನಾ, “ನನಗೆ ಏನಾಗುತ್ತಿದೆ ಎನ್ನುವುದು ಅವರಿಗೆ ತಿಳಿದಿಲ್ಲ. ದಯವಿಟ್ಟು ಎಲ್ಲದಕ್ಕೂ ನಂಬಿಕೆ ಮತ್ತು ಧರ್ಮಕ್ಕೆ ಸಂಬಂಧ ಕಲ್ಪಿಸಬೇಡಿ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News