ಮಣಿರತ್ನಂ ಕಚೇರಿಗೆ ಬಾಂಬ್ ದಾಳಿಯ ಬೆದರಿಕೆ

Update: 2018-10-02 11:08 GMT

ಚೆನ್ನೈ, ಅ.2: ಸಿನೆಮಾ ನಿರ್ದೇಶಕ ಮಣಿರತ್ನಂ ಅವರ ಮೈಲಾಪುರ್ ನ ಪೆರುಮಾಳ್ ಕೊಯಿಲ್ ಬೀದಿಯಲ್ಲಿರುವ ಕಚೇರಿಗೆ ಬಾಂಬ್ ಬೆದರಿಕೆಯ ಕರೆ ಬಂದಿದೆ ಎಂದು ವರದಿಯಾಗಿದೆ.

ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದ್ದು, ಹುಸಿ ಕರೆ ಎಂದ ಸ್ಪಷ್ಟಪಡಿಸಿದೆ. ಕರೆ ಮಾಡಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಮಣಿರತ್ನಂ ನಿರ್ದೇಶನದ ‘ಚೆಕ್ಕ ಚಿವಂದ ವಾನಂ’ ಚಿತ್ರ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅರವಿಂದ್ ಸ್ವಾಮಿ, ಜ್ಯೋತಿಕಾ, ವಿಜಯ್ ಸೇತುಪತಿ, ಸಿಲಾಂಬರಸನ್. ಅರುಣ್ ವಿಜಯ್, ಅದಿತಿ ರಾವ್ ಮೊದಲಾದವರು ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News