ಆದಿತ್ಯನಾಥ್ ವಿರುದ್ಧ ದೂರು ದಾಖಲಿಸಿದ್ದ ಕಾಂಗ್ರೆಸ್ ನಾಯಕಿಗೆ ಜೀವ ಬೆದರಿಕೆ: ಆರೋಪ
Update: 2018-10-03 17:52 GMT
ಲಖ್ನೊ,ಅ.3: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಆರೋಪಿಯಾಗಿರುವ ಎರಡು ದಶಕಗಳಷ್ಟು ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಜೀವ ಬೆದರಿಕೆಗಳು ಬರುತ್ತಿವೆ ಎಂದು ಕಾಂಗ್ರೆಸ್ ನಾಯಕಿಯೊಬ್ಬರು ಆರೋಪಿಸಿದ್ದಾರೆ. ಈ ಕುರಿತು ಬುಧವಾರ ಪಕ್ಷದ ರಾಜ್ಯಧ್ಯಾಕ್ಷ ರಾಜ್ ಬಬ್ಬರ್ ಜೊತೆ ಸೇರಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಲತ್ ಅಝೀಝ್, 1999ರ ಮಹರಗಂಜ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿತ್ಯನಾಥ್ ಹಾಗೂ ಇತರ ಐವತ್ತು ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದೆ. ಇದೀಗ ನಾನು ಮತ್ತು ನನ್ನ ಕುಟುಂಬಸ್ಥರಿಗೆ ವಿವಿಧ ಮೂಲಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆರೋಪಿಸಿದ್ದಾರೆ.