ಬೃಹತ್ ತೈಲ ಆಮದುಗಳಿಂದಾಗಿ ದೇಶಕ್ಕೆ ಆರ್ಥಿಕ ಬಿಕ್ಕಟ್ಟು: ಗಡ್ಕರಿ

Update: 2018-10-04 16:37 GMT

ಹೊಸದಿಲ್ಲಿ,ಅ.4: ತನ್ನ ಬೃಹತ್ ತೈಲ ಆಮದುಗಳಿಂದಾಗಿ ಭಾರತವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಇಲ್ಲಿ ಹೇಳಿದರು.

ಡಾಲರ್‌ನೆದುರು ರೂಪಾಯಿ ಪತನ ಮತ್ತು ಹೆಚ್ಚುತ್ತಿರುವ ದೇಶದ ವ್ಯಾಪಾರ ಕೊರತೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಪ್ರಮುಖ ಸಚಿವರ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಕರಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿಶ್ವದ ಮೂರನೇ ಅತಿ ದೊಡ್ಡ ತೈಲ ಆಮದು ರಾಷ್ಟ್ರವಾಗಿರುವ ಭಾರತವು ತನ್ನ ತೈಲ ಅಗತ್ಯದ ಶೇ.80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News