ಪತ್ರಕರ್ತ ನಕ್ಕೀರನ್ ಗೋಪಾಲ್ ರನ್ನು ಬಿಡುಗಡೆಗೊಳಿಸಿದ ಕೋರ್ಟ್
Update: 2018-10-09 13:16 GMT
ಚೆನ್ನೈ, ಅ.9: ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಬಗ್ಗೆ ಮಾನಹಾನಿಕರ ಲೇಖನ ಪ್ರಕಟಿಸಿದ್ದಾರೆ ಎಂದು ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪ್ರಸಿದ್ಧ ವಾರಪತ್ರಿಕೆ ‘ನಕ್ಕೀರನ್’ನ ಸಂಪಾದಕರನ್ನು ಚೆನ್ನೈನ ಕೋರ್ಟ್ ಬಿಡುಗಡೆಗೊಳಿಸಿದೆ.
ನಕ್ಕೀರನ್ ಗೋಪಾಲ್ ರನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಪೊಲೀಸರು ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ. “ಇದು ನನ್ನ ಗೆಲುವು ಹಾಗು ರಾಜಭವನದ ಸೋಲು. ರಾಜ್ಯಪಾಲರಿಗೆ ಬೇಕಾದಂತೆ ನಡೆದ ತಮಿಳುನಾಡು ಸರಕಾರಕ್ಕೂ ಇದು ಸೋಲು” ಎಂದು ಗೋಪಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.