ಪಂಚತಾರ ಹೊಟೇಲ್‌ನಲ್ಲಿ ಗಲಾಟೆ: ಮಾಜಿ ಬಿಎಸ್ಪಿ ಸಂಸದನ ಪುತ್ರ ಪೊಲೀಸ್ ಕಸ್ಟಡಿಗೆ

Update: 2018-10-18 10:24 GMT

 ಹೊಸದಿಲ್ಲಿ, ಅ.18: ದಿಲ್ಲಿಯ ಪಂಚತಾರ ಹೊಟೇಲ್‌ನಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಹೊಟೇಲ್‌ನ ಗೆಸ್ಟ್‌ಗಳಿಗೆ ಬೆದರಿಸಿದ ಆರೋಪ ಎದುರಿಸುತ್ತಿದ್ದ ಮಾಜಿ ಬಿಎಸ್ಪಿ ಸಂಸದನ ಪುತ್ರ ಆಶೀಶ್ ಪಾಂಡೆಗೆ ದಿಲ್ಲಿಯ ಪಾಟಿಯಾಲ ನ್ಯಾಯಾಲಯ ಗುರುವಾರ ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.

 ನ್ಯಾಯಾಲಯ ಆಶೀಶ್ ಪಾಂಡೆ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಗುರುವಾರ ಬೆಳಗ್ಗೆ ಪಾಂಡೆೆ ಕೋರ್ಟಿಗೆ ಶರಣಾಗಿದ್ದಾರೆ.

ವಕೀಲ ಎಸ್‌ಪಿಎಂ ತ್ರಿಪಾಠಿ ಶರಣಾಗತಿ ಅರ್ಜಿಯಲ್ಲಿ ಭರ್ತಿ ಮಾಡಿದರು. ಮಾಜಿ ಬಿಎಸ್ಪಿ ಸಂಸದ ರಾಕೇಶ್ ಪಾಂಡೆ ಪುತ್ರ ಆಶೀಷ್ ಪಾಂಡೆ ವಿರುದ್ಧ ತಪ್ಪು ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹೊಟೇಲ್‌ನ ಗೆಸ್ಟ್‌ಗಳಿಗೆ ಪಾಂಡೆ ಪಿಸ್ತೂಲ್ ಹಿಡಿದು ಗದರಿಸುತ್ತಿದ್ದ ದೃಶ್ಯ ರವಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ದಿಲ್ಲಿ ಪೊಲೀಸರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದರು. ಘಟನೆಯ ಬಳಿಕ ಪಾಂಡೆ ತಲೆಮರೆಸಿಕೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News