ವಿಕೃತ ಮನಸ್ಸಿನ ವ್ಯಕ್ತಿಗಳಿಂದ ‘ಮೀಟೂ ಚಳವಳಿ’ ಎಂದ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್!

Update: 2018-10-18 13:00 GMT

ಹೊಸದಿಲ್ಲಿ, ಅ.18: ‘ವಿಕೃತ ಮನಸ್ಸುಗಳಿರುವ ವ್ಯಕ್ತಿಗಳು’ ಮೀಟೂ ಚಳವಳಿಯನ್ನು ಆರಂಭಿಸಿದ್ದಾರೆ ಎಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಕಾವು ಪಡೆದುಕೊಳ್ಳುತ್ತಿರುವ ‘ಮೀಟೂ’ ಚಳವಳಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ವಿಕೃತ ಮನಸ್ಸುಗಳಿರುವ ಜನರ ವರ್ತನೆಯೇ ಈ ಚಳವಳಿಗೆ ಕಾರಣ” ಎಂದು ಹೇಳಿದರು.

ಇದೇ ರೀತಿಯ ಆರೋಪಗಳನ್ನು ಪುರುಷರೂ ಮಾಡುವುದು ಸೂಕ್ತವೇ ಎಂದು ತಾನು ಚಿಂತಿಸುತ್ತಿದ್ದೇನೆ ಎಂದ ಅವರು, “ಇದೊಂದು ಅತೀ ದೊಡ್ಡ ಅವಮಾನ…. ನಾವಿದನ್ನು ಸ್ವೀಕರಿಸಬೇಕೇ?” ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News