ಶಬರಿಮಲೆಯಲ್ಲಿ ಭಾರೀ ಮಳೆ: ಯಾತ್ರೆ ಸ್ಥಗಿತಕ್ಕೆ ದಲಿತ ಹೋರಾಟಗಾರ್ತಿಗೆ ಪೊಲೀಸರು ಸಲಹೆ

Update: 2018-10-20 17:46 GMT

ತಿರುವನಂತಪುರ, ಅ. 20: ಶಬರಿಮಲೆ ಅಯ್ಯಪ್ಪನ ದರ್ಶನದ ಹಿನ್ನೆಲೆಯಲ್ಲಿ ಪಂಪಾಗೆ ಆಗಮಿಸಿರುವ ಕೇರಳದ ದಲಿತ ಮಹಿಳಾ ಫೆಡರೇಶನ್‌ನ ಅಧ್ಯಕ್ಷೆ ಎಸ್.ಪಿ. ಮಂಜು ಅವರು ಪ್ರತಿಕೂಲ ಹವಾಮಾನದ ಕಾರಣಕ್ಕಾಗಿ ಶನಿವಾರ ಶಬರಿಮಲೆಗೆ ತೆರಳಿಲ್ಲ. 38 ವರ್ಷ ವಯಸ್ಸಿನ ಮಂಜು ಅವರು ಪ್ರಸ್ತುತ ಪಂಪಾದ ಪೊಲೀಸ್ ನಿಯಂತ್ರಣಾ ಕೊಠಡಿಯಲ್ಲಿ ಇದ್ದಾರೆ.

ಭಾರೀ ಮಳೆ ಸುರಿಯುತ್ತಿರುವ ಕಾರಣಕ್ಕೆ ಶಬರಿಮಲೆಗೆ ತೆರಳದಂತೆ ಪೊಲೀಸ್ ಅಧಿಕಾರಿಗಳು ಮಂಜು ಅವರಿಗೆ ಸಲಹೆ ನೀಡಿದ್ದಾರೆ. ಆದರೆ, ಅದನ್ನು ಮಂಜು ಅವರು ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೆಲಂಗಾಣದ ಪತ್ರಕರ್ತೆಗೆ ನೀಡಿದ ಭದ್ರತೆಯಂತೆ ಮಂಜು ಅವರಿಗೆ ಕೂಡ ಭದ್ರತೆ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಸುರಿಯುತ್ತಿರುವುದರಿಂದ ಶಬರಿಮಲೆಗೆ ಯಾತ್ರೆ ಮುಂದುವರಿಸುವುದು ಅಪಾಯಕಾರಿ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News