ಲೋಕಸಭಾ ಚುನಾವಣೆಗೆ ಮೈತ್ರಿ: ವಿಪಕ್ಷಗಳ ನಾಯಕರನ್ನು ಭೇಟಿಯಾಗಲು ದಿಲ್ಲಿಗೆ ತೆರಳಿದ ಚಂದ್ರಬಾಬು ನಾಯ್ಡು

Update: 2018-11-01 11:11 GMT

ಹೊಸದಿಲ್ಲಿ, ನ.1:  ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಬಗ್ಗೆ ಮಾತುಕತೆ ನಡೆಸಲು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಇಂದು ರಾಹುಲ್ ಗಾಂಧಿಯವರನ್ನು ಭೇಟಿಯಾಗಲಿದ್ದಾರೆ.

ವಾರದೊಳಗಾಗಿ ನಾಯ್ಡು ಅವರು ದಿಲ್ಲಿಗೆ ನೀಡುತ್ತಿರುವ 2ನೆ ಭೇಟಿ ಇದಾಗಿದೆ. ಅವರು ಈಗಾಗಲೇ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಯಾವತಿ, ಮಮತಾ ಬ್ಯಾನರ್ಜಿಯವರನ್ನು ಭೇಟಿಯಾಗಿದ್ದಾರೆ. ಇಂದು ಶರದ್ ಪವಾರ್ ರನ್ನು ನಾಯ್ಡು ಭೇಟಿಯಾಗಿದ್ದಾರೆ.

“ಭೇಟಿಯ ನಂತರ ಮಾತನಾಡಿದ ಶರದ್ ಪವಾರ್, “ಇತರ ವಿಪಕ್ಷಗಳನ್ನು ಸ್ವಾಗತಿಸಲು ನಾವು ಇಲ್ಲಿದ್ದೇವೆ. ಸರಕಾರದ ವಿರುದ್ಧ ನಾವು ಒಗ್ಗಟ್ಟಾಗಿ ನಿಲ್ಲಲಿದ್ದೇವೆ. ಸಿಬಿಐ, ಇಡಿ ಮತ್ತು ಆರ್ ಬಿಐಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ” ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News