ಲೋಕಸಭಾ ಚುನಾವಣೆ: ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಜೊತೆ ಕೈಜೋಡಿಸಿದ ಚಂದ್ರಬಾಬು ನಾಯ್ಡು

Update: 2018-11-01 14:48 GMT

ಹೊಸದಿಲ್ಲಿ, ನ.1: ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು ಮತ್ತು ರಾಹುಲ್ ಗಾಂಧಿ ಇಂದು ಇಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬಿಜೆಪಿಯನ್ನು 2019ರ ಚುನಾವಣೆಯಲ್ಲಿ ಸೋಲಿಸಲು ಪಣ ತೊಡುವುದಾಗಿ ಎರಡೂ ಪಕ್ಷಗಳು ನಿರ್ಣಯಿಸಿದವು.

“ನಮಗೆ ಇತಿಹಾಸವೊಂದಿದೆ. ಆದರೆ ಆ ಇತಿಹಾಸವನ್ನು ನಾವೀಗ ಬದಿಗಿರಿಸುತ್ತೇವೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ. ನಮ್ಮ ಇತಿಹಾಸದ ಬಗ್ಗೆ ಮಾತನಾಡಬಾರದು, ಭವಿಷ್ಯದ ಬಗ್ಗೆ ಮಾತ್ರ ಮಾತನಾಡಬೇಕು ಎಂದು ನಾವಿಬ್ಬರೂ ನಿರ್ಧರಿಸಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News