ಕೇದಾರ್‌ನಾಥ್ ಟೀಸರ್‌ಗೆ ಅಪಾರ ಪ್ರಶಂಸೆ

Update: 2018-11-03 18:56 GMT

ಸೈಫ್ ಅಲಿಖಾನ್ ಹಾಗೂ ಅಮೃತಾಸಿಂಗ್ ಪುತ್ರಿ ಸಾರಾ ಅಲಿ ಖಾನ್ ಅಭಿನಯದ ಚೊಚ್ಚಲ ಚಿತ್ರ ‘ಕೇದರ್‌ನಾಥ್’, ಈ ವರ್ಷದ ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳಲ್ಲೊಂದು. ಸುಶಾಂತ್‌ಸಿಂಗ್-ಸಾರಾ ಅಲಿಖಾನ್ ನಾಯಕ, ನಾಯಕಿಯರಾಗಿ ನಟಿಸಿರುವ ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಗೊಂಡಿದ್ದು, ಸಿನಿಪ್ರಿಯರ ಮೆಚ್ಚುಗೆ ಪಡೆದಿದೆ.

2013ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದ ಹಿನ್ನೆಲೆಯ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ. ಚಿತ್ರದ ನಾಯಕ ಸುಶಾಂತ್ ಸಿಂಗ್, ಯಾತ್ರಸ್ಥಳವಾದ ಕೇದಾರ್‌ನಾಥ್‌ನಲ್ಲಿ, ಯಾತ್ರಿಕರಿಗೆ ನೆರವಾಗುವ ಹೊರೆಯಾಳುವಿನ ಪಾತ್ರದಲ್ಲಿ ನಟಿಸಿದ್ದಾರೆ. ಗೌರಿಕುಂಡದಿಂದ ಕೇದಾರನಾಥ್‌ವರೆಗೆ 14 ಕಿ.ಮೀ.ಗಳ ಯಾತ್ರೆಯ ನಡುವೆ ನಡೆಯುವ ಕಥಾವಸ್ತುವನ್ನು ಈ ಚಿತ್ರ ಒಳಗೊಂಡಿದೆ. ‘ರಾಕ್ ಆನ್’ ಹಾಗೂ ‘ಕಾಯ್ ಪೊ ಚೆ’ ಚಿತ್ರಗಳ ಖ್ಯಾತಿಯ ಅಭಿಷೇಕ್ ಕಪೂರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಕೇದಾರ್‌ನಾಥ್ ಡಿಸೆಂಬರ್ 7ರಂದು ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News