ತಾರತಮ್ಯವನ್ನು ಆರೋಪಿಸಿ ಬೌದ್ಧಧರ್ಮಕ್ಕೆ ಸೇರಿದ 25 ದಲಿತರು

Update: 2018-11-12 16:19 GMT

ಮುಝಫ್ಫರ್‌ನಗರ,ನ.12: ಶಾಮ್ಲಿ ಜಿಲ್ಲೆಯಲ್ಲಿ ನಡೆದ ಸಮಾರಂಭವೊಂದರಲ್ಲಿ 25 ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.

ತಮ್ಮ ಸಮುದಾಯದ ವಿರುದ್ಧ ತಾರತಮ್ಯಗಳು ಮತ್ತು ದೌರ್ಜನ್ಯಗಳು ನಡೆಯುತ್ತಿರುವುದರಿಂದ ತಾವು ಈ ಕ್ರಮವನ್ನು ತೆಗೆದುಕೊಂಡಿರುವುದಾಗಿ ದಲಿತ ನಾಯಕ ದೇವಿದಾಸ್ ಜಯಂತ ಅವರು ತಿಳಿಸಿದರು.

ಯಾವುದೇ ಬಲವಂತದಿಂದ ಮತಾಂತರ ಕಾರ್ಯಕ್ರಮ ನಡೆದಿಲ್ಲ ಎಂದು ತಿಳಿಸಿದ ಸರ್ಕಲ್ ಆಫೀಸರ್ ರಾಜೇಶ ಕುಮಾರ ತಿವಾರಿ ಅವರು,ಪ್ರತಿಯೊಬ್ಬರಿಗೂ ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸುವ ಸ್ವಾತಂತ್ರವಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News