ಚೆನ್ನೈ:ಡಿ.16ರಂದು ಕರುಣಾನಿಧಿ ಪ್ರತಿಮೆಯ ಅನಾವರಣ

Update: 2018-11-15 14:36 GMT

ಚೆನ್ನೈ,ನ.15: ಡಿಎಂಕೆಯ ಮುಖ್ಯಸ್ಥರಾಗಿದ್ದ ದಿ.ಎಂ.ಕರುಣಾನಿಧಿಯವರ ಪ್ರತಿಮೆಯನ್ನು ಇಲ್ಲಿ ಡಿ.15ರಂದು ಅನಾವರಣಗೊಳಿಸಲಾಗುವುದು ಎಂದು ಪಕ್ಷವು ಗುರುವಾರ ಪ್ರಕಟಿಸಿದೆ.

ಪಕ್ಷದ ಕೇಂದ್ರ ಕಚೇರಿಯಲ್ಲಿ ಡಿಎಂಕೆ ಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರ ನವೀಕೃತ ಪ್ರತಿಮೆಯ ಪಕ್ಕದಲ್ಲಿ  ಕರುಣಾನಿಧಿಯವರ ಆಳೆತ್ತರದ ಪ್ರತಿಮೆಯು ಸ್ಥಾಪನೆಗೊಳ್ಳಲಿದೆ. ವಿವಿಧ ರಾಜಕೀಯ ಪಕ್ಷಗಳ ರಾಷ್ಟ್ರಮಟ್ಟದ ನಾಯಕರು ಪ್ರತಿಮೆ ಅನಾವರಣ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದೂ ಅದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News