ಗುಜರಾತ್‌ನಲ್ಲಿ 80 ಅಡಿ ಎತ್ತರದ ಬುದ್ಧನ ಪ್ರತಿಮೆ ಸ್ಥಾಪನೆಗೆ ಚಿಂತನೆ

Update: 2018-11-23 14:42 GMT

ಅಹ್ಮದಾಬಾದ್, ನ. 23: ಗುಜರಾತ್‌ನಲ್ಲಿ 182 ಮೀಟರ್ ಎತ್ತರದ ಸರ್ದಾರ್ ವಲ್ಲಭಾ ಭಾಯಿ ಪಟೇಲ್ ಅವರ ‘ಏಕತಾ ಪ್ರತಿಮೆ’ ಸ್ಥಾಪಿಸಿದ ಬಳಿಕ ಇನ್ನೊಂದು ಬೃಹತ್ ಬುದ್ಧನ ಪ್ರತಿಮೆ ಸ್ಥಾಪನೆಯಾಗಲಿದೆ. ಗಾಂಧಿನಗರ ಜಿಲ್ಲೆಯಲ್ಲಿ 80 ಅಡಿ ಎತ್ತರದ ಬುದ್ಧನ ಪ್ರತಿಮೆ ಸ್ಥಾಪಿಸಲು ಸ್ಥಳ ನೀಡುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸಂಘಕಾಯ ಪ್ರತಿಷ್ಠಾನ ಹೇಳಿದೆ.

ಶೀಘ್ರದಲ್ಲಿ ಭೂಮಿ ದೊರೆಯುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಭಂತೇ ಪ್ರಾಶಿ ರತ್ನಾ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಗುಜರಾತ್‌ನಲ್ಲಿರುವ ಬೌದ್ಧ ವಿಶ್ವವಿದ್ಯಾನಿಲಯದಲ್ಲಿ ಇದಕ್ಕೆ ಅಡಿಪಾಯ ಹಾಕಲು ಯೋಜಿಸಲಾಗಿದೆ ಎಂದು ಭಂತೆ ಪ್ರಾಶಿ ರತ್ನಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News