ಝಲಾರ್‌ಪಠಾಣ ಕ್ಷೇತ್ರದಲ್ಲಿ ವಸುಂಧರಾ ರಾಜೆಗೆ ಐದನೇ ಬಾರಿಗೆ ಜಯ

Update: 2018-12-11 18:08 GMT

ಜೈಪುರ, ಡಿ. 11: ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೆ ಝಲಾರ್‌ಪಠಾನ್ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮಾನವೇಂದ್ರ ಸಿಂಗ್ ಅವರನ್ನು ಸೋಲಿಸಿ ಐದನೇ ಭಾರಿ ಆಯ್ಕೆಯಾಗಿದ್ದಾರೆ. ಸೆಪ್ಟಂಬರ್‌ನಲ್ಲಿ ಬಿಜೆಪಿ ತ್ಯಜಿಸಿದ್ದ ಹಾಗೂ ಅಕ್ಟೋಬರ್ 17ರಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾನವೇಂದ್ರ ಸಿಂಗ್ ವಿರುದ್ಧ ರಾಜೆ ಅವರು 34,890 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2013 ವಿಧಾನ ಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ರಾಜೆ ಅವರು 60,896 ಮತಗಳ ಅಂತರದಿಂದ ಜಯ ಗಳಿಸಿದ್ದರು. ಆಗ ಬಿಜೆಪಿಯ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರರಾಗಿರುವ ಮಾನವೇಂದ್ರ ಸಿಂಗ್ ಶಿಯೋ ಕ್ಷೇತ್ರದಲ್ಲಿ ಸ್ಪರ್ಧಿಸಿ ತನ್ನ ಪ್ರತಿಸ್ಪರ್ಧಿಯನ್ನು 31,425 ಮತಗಳ ಅಂತರದಿಂದ ಸೋಲಿಸಿದ್ದರು. ರಾಜಸ್ಥಾನ ವಿಧಾನ ಸಭೆ ಚುನಾವಣೆಯಲ್ಲಿ ಝಲಾರ್‌ಪಠಾನ್ ಕ್ಷೇತ್ರವನ್ನು ರಾಜೆ ಅವರು 5ನೆ ಅವಧಿಯಲ್ಲಿ ಕೂಡ ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News