ಪುಲ್ವಾಮ :ಭದ್ರತಾ ಪಡೆಗಳ ಗುಂಡಿನ ದಾಳಿಗೆ 6 ಮಂದಿ ನಾಗರಿಕರು ಬಲಿ

Update: 2018-12-15 07:51 GMT

ಶ್ರೀನಗರ, ಡಿ.15: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಯುವಕರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಆರು ಮಂದಿ ನಾಗರಿಕರು ಮೃತಪಟ್ಟಿದ್ದಾರೆ.

ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮಾನಾದರೆ, ಸೇಬಿನ ತೋಟವೊಂದರಲ್ಲಿ ಅಡಗಿಕೊಂಡಿದ್ದ ಮೂವರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಸಾಯಿಸಲಾಗಿದೆ.

 ಎನ್‌ಕೌಂಟರ್ ನಡೆದ ಪುಲ್ವಾಮದ ಸಿರ್ನೂ ಗ್ರಾಮದಲ್ಲಿ ಸ್ಥಳೀಯ ಯುವಕರು ಹಾಗೂ ಭದ್ರತಾ ಪಡೆಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಭದ್ರತಾ ಪಡೆಗಳು ನಡೆಸಿರುವ ಗುಂಡಿನ ದಾಳಿಗೆ 6 ಮಂದಿ ನಾಗರಿಕರು ಬಲಿಯಾದರು.

ಓರ್ವ ಇಂಡೋನೇಶ್ಯಾದಿಂದ ಕೆಲವೇ ತಿಂಗಳ ಹಿಂದೆ ತನ್ನ ಪತ್ನಿ ಹಾಗೂ ಮೂರು ತಿಂಗಳ ಮಗುವಿನೊಂದಿಗೆ ವಾಪಸಾಗಿದ್ದ ಎಂಬಿಎ ಪದವೀಧರ ಅಬಿದ್ ಹುಸೈನ್ ಮೃತಪಟ್ಟ ನಾಗರಿಕನಾಗಿದ್ದಾರೆ. ನಾಗರಿಕರ ಸಾವಿನ ಬಳಿಕ ಗ್ರಾಮದಲ್ಲಿ ಮತ್ತೆ ಘರ್ಷಣೆ ಆರಂಭವಾಗಿದ್ದು, ಪುಲ್ವಾಮದಲ್ಲಿ ಇಂಟರ್‌ನೆಟ್ ಸಂಪರ್ಕ ಕಡಿತ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News