ಆತ್ಮಹತ್ಯೆಗೈಯಲು ಬಾಲಕಿಗೆ ಉತ್ತೇಜನ: ಕ್ರೈಸ್ತ ಪಾದ್ರಿಯ ಬಂಧನ

Update: 2019-01-20 17:37 GMT

ಝಬುವಾ (ಮಧ್ಯಪ್ರದೇಶ), ಜ. 20: ಹದಿನೇಳು ವರ್ಷದ ಬಾಲಕಿಯನ್ನು ಆತ್ಮಹತ್ಯೆಗೈಯಲು ಉತ್ತೇಜಿಸಿದ ಮಧ್ಯಪ್ರದೇಶದ ಝಬುವಾ ಜಿಲ್ಲೆಯ ಕೆಥೋಲಿಕ್ ಪಾದ್ರಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಫಾದರ್ ಪ್ರಕಾಶ್ ದಾಮೋರ್ (33) ಎಂದು ಗುರುತಿಸಲಾಗಿದೆ.

ಜನವರಿ 4ರಂದು ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸುಸೈಡ್ ನೋಟ್‌ನಲ್ಲಿ ದಾಮೋರ್ ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದರು ಎಂದು ಹೇಳಿರುವುದಾಗಿ ರಾಣಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೈಲಾಸ್ ಚೌಹಾನ್ ಹೇಳಿದ್ದಾರೆ. ‘‘ಬಾಲಕಿ ಮಿಷನರಿ ಶಾಲೆಯಲ್ಲಿ 11ನೇ ತರಗತಿ ಕಲಿಯುತ್ತಿರುವಾಗ ಆರೋಪಿ ಮೊದಲ ಬಾರಿಗೆ ಆಕೆಯನ್ನು ಭೇಟಿಯಾಗಿದ್ದರು’’ ಎಂದು ಅವರು ತಿಳಿಸಿದ್ದಾರೆ.

ದಾಮೋರ್‌ನನ್ನು ಅದೇ ದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಚರ್ಚ್ ಬಾಲಕಿಯ ಕುಟುಂಬದೊಂದಿಗೆ ನಿಲ್ಲುತ್ತದೆ. ಆದರೆ, ಸೂಕ್ತ ತನಿಖೆ ನಡೆಸದೆ ದಾಮೋರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಝುಬುವಾ ಕೆಥೋಲಿಕ್ ಡಯಾಸಿಸ್‌ನ ವಕ್ತಾರ ಫಾದರ್ ರೋಕಿ ಶಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News