ಪಂಜಾಬ್: ಮೃಗಾಲಯದಲ್ಲಿ ಸಿಂಹಗಳಿಗೆ ವ್ಯಕ್ತಿ ಬಲಿ

Update: 2019-01-21 15:53 GMT

ಚಂಡೀಗಡ, ಜ.21: ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿರುವ ಛಾಟ್ಬಿರ್ ಮೃಗಾಲಯದಲ್ಲಿ ಸಿಂಹಗಳ ರಕ್ಷಿತ ಪ್ರದೇಶಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಸಿಂಹಗಳ ದಾಳಿಯಿಂದ ಮೃತಪಟ್ಟ ಘಟನೆ ನಡೆದಿದೆ.

ಮೃಗಾಲಯದ ಬಳಿ ಇದ್ದ ಸಫಾರಿ (ವನ್ಯಜೀವಿ ಪಾರ್ಕ್)ಯ 12 ಅಡಿ ಎತ್ತರದ ಮುಳ್ಳು ತಂತಿಯ ಬೇಲಿಯನ್ನು ಏರಿ ಒಳಗೆ ಜಿಗಿದಿದ್ದ ವ್ಯಕ್ತಿಯ ಮೇಲೆ ಎರಡು ಸಿಂಹಗಳು ದಾಳಿ ನಡೆಸಿವೆ. ಈತನ ಚೀರಾಟ ಕೇಳಿ ಧಾವಿಸಿ ಬಂದ ಸಿಬ್ಬಂದಿಗಳು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆತ ಮೃತಪಟ್ಟಿದ್ದಾನೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಆತ 12 ಅಡಿ ಎತ್ತರದ ಗೋಡೆ ಹಾಗೂ ಅದರ ಮೇಲಿದ್ದ ಮುಳ್ಳು ತಂತಿ ಬೇಲಿಯನ್ನು ಹತ್ತಿ ಒಳಗೆ ಹೋದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News