ಕಾರವಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಅಜಿತ್ ದೋವಲ್ ಪುತ್ರ
Update: 2019-01-21 16:27 GMT
ಹೊಸದಿಲ್ಲಿ, ಜ.21: ಮಾನನಷ್ಟ ಲೇಖನ ಪ್ರಕಟಿಸಿರುವ ಆರೋಪದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪುತ್ರ ವಿವೇಕ್ ದೋವಲ್ ಸೋಮವಾರ 'ಕಾರವಾನ್' ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ವಿರುದ್ಧವೂ ಕಾನೂನು ಕ್ರಮ ಜರಗಿಸುವಂತೆ ಕೋರಿದ್ದಾರೆ.
ವಿವೇಕ್ ದೋವಲ್ ಖಾಸಗಿ ಹೂಡಿಕೆ ನಿಧಿ(ಹೆಜ್ ಫಂಡ್) ವ್ಯವಹಾರ ನಡೆಸುತ್ತಿದ್ದು ಇದರ ನಿರ್ದೇಶಕರ ಪೂರ್ವಚರಿತ್ರೆ ಸಂಶಯಾಸ್ಪದವಾಗಿದೆ ಎಂದು ಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆ, ಲೇಖನ ಬರೆದವರು ಹಾಗೂ ಜೈರಾಮ್ ರಮೇಶ್ ವಿರುದ್ಧ ದೂರು ನೀಡಲಾಗಿದೆ. ಈ ಅರ್ಜಿಯ ವಿಚಾರಣೆ ಇಂದು(ಜ.22ರಂದು) ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.