ಮುಂಬೈನಲ್ಲಿ ಶಾಸಕರನ್ನು ಗೂಂಡಾಗಳು ಕೂಡಿ ಹಾಕಿದ್ದಾರೆ : ಸಂಸದ ಡಿಕೆ ಸುರೇಶ್

Update: 2019-02-07 05:46 GMT

ಹೊಸದಿಲ್ಲಿ, ಫೆ.7: ಮುಂಬೈನಲ್ಲಿ ಕರ್ನಾಟಕದ ಕೆಲವು ಕಾಂಗ್ರೆಸ್ ಶಾಸಕರನ್ನು ಬಲವಂತವಾಗಿ ಬಿಜೆಪಿಯ ಗೂಂಡಾಗಳು ಕೂಡಿ ಹಾಕಿದ್ದಾರೆ. ಅವರ ಕ್ಷೇತ್ರಗಳಿಗೆ ಹೋಗದಂತೆ ಬೆದರಿಕೆ ಹಾಕಲಾಗುತ್ತಿದೆ  ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರಕಾರ ಮತ್ತು ಬಿಜೆಪಿ ವಿರುದ್ಧ ಹರಿ ಹಾಯ್ದರು.

ಬಂಧನದಲ್ಲಿರುವ ಶಾಸಕರಿಗೆ ರಾಜಕೀಯವಾಗಿ ಮುಗಿಸುವ ಬೆದರಿಕೆ ಹಾಕಲಾಗುತ್ತಿದೆ.ಶಾಸಕರನ್ನು ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರ ಸರಕಾರ ನೆರವಿನಲ್ಲಿ ಕೂಡಿ ಹಾಕಲಾಗಿದೆ. ಶಾಸಕರೊಂದಿಗೆ ನಡೆಸಿದ ಮಾತುಕತೆಯ  ಎಲ್ಲ ವೀಡಿಯೋ ದಾಖಲೆಗಳು  ನಮ್ಮಲ್ಲಿವೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಆಪರೇಶನ್ ಕಮಲ ಯಾರೂ ನೋಡಿರಲಿಲ್ಲ. ಆಪರೇಶನ್ ಕಮಲ ಆರಂಭವಾಗಿದ್ದೇ ಕರ್ನಾಟಕದಲ್ಲಿ. ಈ ಕೀರ್ತಿ ಬಿ.ಎಸ್ .ಯಡಿಯೂರಪ್ಪರಿಗೆ ಸಲ್ಲುತ್ತದೆ. ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರ ಸರಕಾರ ಜೊತೆಯಾಗಿ ಕರ್ನಾಟಕದ ಸಮ್ಮಿಶ್ರ ಸರಕಾರವನ್ನು ಬೀಳಿಸುವ ಯತ್ನ ನಡೆಸುತ್ತಿದೆ  ಎಂದು ಆರೋಪಿಸಿದರು.

 ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯುಗ ಅಂತ್ಯವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ ಎಂದು  ಡಿಕೆ ಸುರೇಶ್ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News