ಪತ್ನಿಯನ್ನು ಕೊಂದು, ದೇಹ ಕತ್ತರಿಸಿದ ಎಸೆದ ಆರೋಪ: ತಮಿಳು ನಿರ್ದೇಶಕನ ಬಂಧನ

Update: 2019-02-09 15:44 GMT

ಚೆನ್ನೈ, ಫೆ.9: ಪತ್ನಿಯನ್ನು ಕೊಂದು, ದೇಹವನ್ನು ಕತ್ತರಿಸಿದ ಆರೋಪದಲ್ಲಿ ಚೆನ್ನೈ ಮೂಲದ ತಮಿಳು ಚಿತ್ರ ನಿರ್ದೇಶಕ ಬಾಲಕೃಷ್ಣನ್ ಎಂಬಾತನನ್ನು ಬಂಧಿಸಲಾಗಿದೆ.

ಪತ್ನಿಯನ್ನು ಕೊಲೆಗೈದಿದ್ದ ಈತ ಮೃತದೇಹ ಕತ್ತರಿಸಿದ ನಗರದ ಹಲವೆಡೆ ಎಸೆದಿದ್ದ ಎನ್ನಲಾಗಿದೆ. ಪತ್ನಿಯ ಕೈಯಲ್ಲಿದ್ದ ಶಿವ-ಪಾರ್ವತಿ ಹಚ್ಚೆಯಿದ್ದ ತುಂಡರಿಸಲ್ಪಟ್ಟ ಕೈಯೊಂದನ್ನು ಪೊಲೀಸರು ಪತ್ತೆಹಚ್ಚಿದ ನಂತರ ಈತನನ್ನು ಬಂಧಿಸಿದ್ದಾರೆ.

ಪತ್ನಿಯ ಶೀಲ ಶಂಕಿಸಿ ಈ ಕೃತ್ಯ ಎಸಗಿದ್ದಾಗಿ ಈತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನಗಿಂತ 14 ವರ್ಷ ಕಿರಿಯಳಾದ ಸಂಧ್ಯಾಳನ್ನು ಈತ 2000ದಲ್ಲಿ ಮದುವೆಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News