ಯಾವ ದೇವರು ನಮ್ಮನ್ನು ಕಾಪಾಡಿದನೋ ಗೊತ್ತಿಲ್ಲ: ಮೈಸೂರಿನ ಯೋಧ ಗೋಪಾಲ್

Update: 2019-02-15 09:16 GMT

ಶ್ರೀನಗರ, ಫೆ.15 ಸಾವು ಯಾರಿಗೂ ಸಹ ಈ  ರೀತಿ ಬರಬಾರದು. ಯಾವ ದೇವರು ನಮ್ಮನ್ನು ಕಾಪಾಡಿದನೋ ಗೊತ್ತಿಲ್ಲ ಎಂದು ಪುಲ್ವಾಮದಲ್ಲಿ ಉಗ್ರ ದಾಳಿಯ ವೇಳೆ ಸ್ಥಳದಲ್ಲಿದ್ದ ಯೋಧ ಮೈಸೂರಿನ ಸಾಲಿಗ್ರಾಮದ ನಿವಾಸಿ ಗೋಪಾಲ್  ತಿಳಿಸಿದ್ದಾರೆ

ಖಾಸಗಿ ಚಾನಲ್ ಗೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ಅವರು  ಉಗ್ರರ ದಾಳಿ ನಡೆಯುವಾಗ ನಾನು  20 ಅಡಿ ದೂರದಲ್ಲಿ ಇದ್ದೆ.  ನಾವು  ಮಧ್ಯಾಹ್ನ  1:30ಕ್ಕೆ  ಊಟ , ನೀರು ಇಲ್ಲದೆ ಹೊರಟಿದ್ದೆವು. 20 ನಿಮಿಷಗಳಲ್ಲಿ ದುಷ್ಕೃತ್ಯ  ನಡೆದು ಹೋಯಿತು.  ಜನತೆಗೆ ಏನು ಆಗಿಲ್ಲ. ಅದು ಹೆಮ್ಮೆಯ ವಿಷಯ. ಉಗ್ರರ ಪೈಶಾಚಿಕ ಕೃತ್ಯಕ್ಕೆ ಪ್ರತಿಕಾರ ತೀರಿಸುತ್ತೇವೆ  ಎಂದು  ಹೇಳಿದರು.

ಉಗ್ರರ ದಾಳಿಯಲ್ಲಿ  ಮಂಡ್ಯದ ಯೋಧ ಎಚ್.ಗುರು ಸೇರಿದಂತೆ 44 ಮಂದಿ ಹುತಾತ್ಮರಾಗಿದ್ದಾರೆ. ಗೋಪಾಲ್ ಅಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News